ಬಳ್ಳಾರಿ: ಜಿಎಸ್ಟಿ ಸಂಖ್ಯೆ ವರ್ಗಾವಣೆಗೆ 90 ಸಾವಿರ ರೂ. ಲಂಚ ಪಡೆಯುತ್ತಿದ್ದ ಇಲ್ಲಿನ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ವಾಣಿಜ್ಯ ತೆರಿಗೆ ಆಯುಕ್ತ ಮಲ್ಲಿಕಾರ್ಜುನ ಕುಬಸದ ಲೋಕಾಯುಕ್ತ ಪೊಲೀಸರ ಬಲೆಗೆ ಮಂಗಳವಾರ ಬಿದ್ದಿದ್ದಾರೆ.
ಜಿಲ್ಲೆಯ ಸಿರುಗುಪ್ಪ ನಿವಾಸಿ, ತೆರಿಗೆ ಸಲಹೆಗಾರ ಹಾಗೂ ಅಕೌಂಟೆಂಟ್ ಆಗಿರುವ ಕೆ. ಶ್ರೀನಿವಾಸ್ ನೀಡಿದ ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದರು.
“ಕೆ.ಮಲ್ಲಿಕಾರ್ಜುನ ಎಂಬುವರಿಗೆ ಸಂಬಂಧಿಸಿದ ಹಳೆಯ ಜಿಎಸ್ಟಿ ಸಂಖ್ಯೆ ತಾಂತ್ರಿಕ ದೋಷದಿಂದ ಮೈಗ್ರೇಟ್ ಆಗಿರಲಿಲ್ಲ. ಈ ಜಿಎಸ್ಟಿ ಖಾತೆಯಲ್ಲಿದ್ದ ಇನ್ಪುಟ್ ಟ್ಯಾಕ್ಸ್ ಅನ್ನು ಹೊಸ ಜಿಎಸ್ಟಿ ಸಂಖ್ಯೆಗೆ ವರ್ಗಾವಣೆ ಮಾಡಿಕೊಡುವಂತೆ ಶ್ರೀನಿವಾಸರಾವ್ ಅವರು ವಾಣಿಜ್ಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.
ಕಚೇರಿಯಲ್ಲಿ90 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ, ಮಲ್ಲಿಕಾರ್ಜುನ ಅವರನ್ನು ಬಂಧಿಸಲಾಗಿದೆ,” ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.




