ಮಲ್ಪೆ : ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರ ಬಣಉಡುಪಿಯ ಮಾಜಿ ಜಿಲ್ಲಾಧ್ಯಕ್ಷ ಸತೀಶ್ ಕೆ. ಪೂಜಾರಿ ಇಂದು ಮುಂಜಾನೆ ನಿಧನರಾದರು.
ಉಡುಪಿ ತಾಲೂಕಿನ ಮಲ್ಪೆ ಕಲ್ಮಾಡಿಯ ನಿವಾಸಿಯಾಗಿರುವ ಸತೀಶ್ ಕೆ. ಪೂಜಾರಿ ಅನಾರೋಗ್ಯದಿಂದ ಬಳಲುತ್ತಿದ್ದರು.
ಅವರಿಗೆ 54 ವರ್ಷ ವಯಸ್ಸಾಗಿತ್ತು. ಸತೀಶ್ ಕೆ. ಪೂಜಾರಿ ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ.
ಸತೀಶ್ ಯಾನೆ ಸಚ್ಚು ಕಲ್ಮಾಡಿ ಕೆಲವು ವರ್ಷಗಳ ಹಿಂದೆ ಉಡುಪಿ ಬಸ್ ಸ್ಟಾಂಡ್ ನಲ್ಲಿ ನಡೆದಿದ್ದ ಬಸ್ ಏಜೆಂಟ್ ಶೆಣೈ ಎಂಬವರ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರು.ಇವರ ಮೇಲೆ ಉಡುಪಿ ನಗರ ಪೊಲೀಸ್ ಠಾಣೆ ರೌಡಿ ಶೀಟ್ ಇತ್ತು. ಆನಂತರ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲೆಯ ಮೊದಲ ಅಧ್ಯಕ್ಷರಾಗಿದ್ದರು.





