ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ವ್ಯಕ್ತಿಯೋರ್ವರು ಕಡಿಮೆ ಗುಣಮಟ್ಟದ ಚಿನ್ನಾಭರಣಗಳನ್ನು ಸಂಘದಲ್ಲಿ ಅಡವು ಇಟ್ಟು ಸಾಲ ಪಡೆದು ಸಂಘಕ್ಕೆ ಆರ್ಥಿಕ ನಷ್ಟ ಮತ್ತು ನಂಬಿಕೆ ದ್ರೋಹ ಮಾಡಿರುವ ಆರೋಪದ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.
ವಂಚನೆ ಮಾಡಿರುವ ಆರೋಪಿ ಯಶವಂತ ಎಂದು ತಿಳಿದು ಬಂದಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರರಣದ ಸಾರಾಂಶ : ಪಿರ್ಯಾದಿದಾರರಾದ ಸುರೇಖಾ ಕುಮಾರಿ (39) ಇವರು ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ (ನಿ), ಕೊಕ್ಕರ್ಣೆ ಶಾಖೆ ಇವರ ಶಾಖಾ ವ್ಯವಸ್ಥಾಪಕರಾಗಿದ್ದು, ದಿನಾಂಕ 24/07/2025 ರಂದು ಆರೋಪಿ ಯಶವಂತ ಕುಮಾರ್ ಶಾಖೆಗೆ ಬಂದು ಕೆಲವು ಚಿನ್ನಾಭರಣಗಳಾದ 04 ಬಳೆ, 1 ಎಳೆ ಚೈನ್ ಇವುಗಳ ತೂಕ 69.400 ಗ್ರಾಂ ಆಗಿದ್ದು, ಗರಿಷ್ಠ ಸಾಲ ನೀಡಲು ಕೇಳಿಕೊಂಡಿದ್ದು, ಅದರಂತೆ ಸಂಘದ ಅಪ್ರೈಸರ್ ಆದ ಕೆ. ಭಾಸ್ಕರ ಆಚಾರ್ಯ ರವರು ಚಿನ್ನಾಭರಣಗಳನ್ನು ಪರೀಕ್ಷಿಸಿ 5,20,500/- ರೂ ಸಾಲ ನೀಡಬಹುದೆಂದು ದೃಢಿಕರಣ ನೀಡಿದ್ದು, ಅದರ ಆಧಾರದ ಮೇಲೆ 4,60,000/ರೂ ಸಾಲ ನೀಡಿದ್ದು, ಕೆಲವೊಂದು ದಿನಗಳ ಬಳಿಕ ಆರೋಪಿಯು ಅಡವಿರಿಸಿದ ಚಿನ್ನಾಭರಣಗಳನ್ನು ಪರೀಕ್ಷಿಸಿದಾಗ ಅಲ್ಪ ಗುಣಮಟ್ಟದೆಂದು ಅಪ್ರೈಸರ್ ತಿಳಿಸಿದ್ದು, ನಂತರ ಆರೋಪಿಯು ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ. ಆರೋಪಿಯು ಕಡಿಮೆ ಗುಣಮಟ್ಟದ ಚಿನ್ನಾಭರಣಗಳನ್ನು ಸಂಘದಲ್ಲಿ ಅಡವು ಇಟ್ಟು ಸಾಲ ಪಡೆದು ಸಂಘಕ್ಕೆ ಆರ್ಥಿಕ ನಷ್ಟ ಮತ್ತು ನಂಬಿಕೆ ದ್ರೋಹ ಮಾಡಿರುತ್ತಾರೆ.
ಆರೋಪಿಯೊಂದಿಗೆ ಉಮಾನಾಥ ಶೆಟ್ಟಿ ಎಂಬಾತನು ಶಾಮೀಲು ಇರುವ ಬಗ್ಗೆ ಸಂದೇಹವಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 224/2025 ಕಲಂ: 316(2)̤,318 R/W 3 (5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.



