ಉಡುಪಿ : ಜಿಲ್ಲೆಯ ಭ್ರಷ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀ ನಾರಾಯಣ ಪಿ.ನಾಯ್ಕ್ ಮನೆಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಎರಡನೇ ದಿನವೂ ತನಿಖೆ ಮುಂದುವರಿದಿದ್ದು, ಮತ್ತೆ ಕೋಟಿ ಮೌಲ್ಯದ ಠೇವಣಿ ಪತ್ರ ದೊರಕಿವೆ.
ಮಂಗಳವಾರ ಬೆಳಗ್ಗಿನ ಜಾವ ಆರ್ಟಿಓ ಅಧಿಕಾರಿ ಲಕ್ಷ್ಮೀ ನಾರಾಯಣ ಪಿ. ನಾಯ್ಕ್ ಮನೆ, ಕಚೇರಿ, ಸಂಬಂಧಿಕರ ಮನೆ ಸಹಿತ ಐದು ಕಡೆಗಳಿಗೆ ದಾಳಿ ನಡೆಸಿ ಅಕ್ರಮವಾಗಿ ಸಂಪಾದಿಸಿದ 2.21ಕೋಟಿ ಮೌಲ್ಯದ ನಗದು, ಠೇವಣಿ ಪತ್ರ, ಭೂಮಿ ಖರೀದಿಯ ದಾಖಲೆ ಚಿನ್ನಾಭರಣ ಪತ್ತೆ ಹಚ್ಚಿದ್ದರು. ಬುಧವಾರ ಮತ್ತೆ ಲಕ್ಷ್ಮೀ ನಾರಾಯಣ ಮನೆ ತಪಾಸಣೆ ಸಂದರ್ಭದಲ್ಲಿ 94ಲಕ್ಷ ರೂ. ಅಂಚೆ ಕಚೇರಿ ಮತ್ತು ಬ್ಯಾಂಕ್ನಲ್ಲಿಟ್ಟ ಠೇವಣಿ ಪತ್ರ ಸಿಕ್ಕಿದೆಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಸೇವೆಗಳು ವಾಹನಗಳ ನೋಂದಣಿ, ಪರವಾನಗಿ, ತೆರಿಗೆ ಸಂಗ್ರಹ, ವಾಹನ ನೋಂದಣಿ ಪ್ರಮಾಣಪತ್ರ (RC) ನೀಡುವುದು, ಚಾಲನಾ ಪರವಾನಗಿ, ವಿಮೆ ಮತ್ತು ವಾಹನಗಳ ಸುರಕ್ಷತೆಯನ್ನು ಖಚಿತಪಡಿಸುವುದು ಇವುಗಳಿಗೆ ಸರಕಾರ ನಿಗದಿ ಪಡಿಸಿದ ಮೊತ್ತಕ್ಕಿಂತ ಅಕ್ರಮವಾಗಿ ಮೂರು ಪಟ್ಟು ಬ್ರೋಕರ್ಗಳ ಮೂಲಕ ವಸೂಲಿ ಮಾಡುತ್ತಿದ್ದ ಎಂದು ದೂರು ಇತನ ಮೇಲೆ ಇತ್ತು.
ಅಲೆವೂರಿನ ರವಿ ಸೇರಿಗಾರನ ಕಚೇರಿ, ಮನೆ ಹಾಗೂ ಬೈಕ್ನಲ್ಲಿ ಸರಕಾರಿ ದಾಖಲೆ ಪತ್ತೆಯಾಗಿದೆ. ಮಾತ್ರವಲ್ಲದೆ ಲಕ್ಷ್ಮೀ ನಾರಾಯಣ ಪಿ.ನಾಯ್ಕ್ ಹೆಸರಿದ್ದ ಚೀಟಿಯಲ್ಲಿ 3.5ಲಕ್ಷ ರೂ ಚೀಲ ಬ್ರೋಕರ್ ರವಿ ಮನೆಯಲ್ಲಿ ಪತ್ತೆಯಾಗಿದೆ. ಇತ ದಿನನಿತ್ಯ ಕಚೇರಿಗೆ ಬರುವ ಬ್ರೋಕರ್ಗಳು ನೀಡುವ ಲಕ್ಷಾಂತರ ರೂ. ಸಂಗ್ರಹಿಸಿ ಅಧಿಕಾರಿಗೆ ನೀಡುತ್ತ ಇದ್ದ ಎನ್ನಲಾಗಿದೆ. ಸರಕಾರಿ ದಾಖಲೆ ಅಕ್ರಮವಾಗಿ ತನ್ನ ಮನೆಯಲ್ಲಿ ಇರಿಸಿಕೊಂಡು ಆರೋಪದಲ್ಲಿ ಬ್ರೋಕರ್ ರವಿ ಬಂಧನ ಆಗುವ ಸಾಧ್ಯತೆ ಇದೆ ಎಂದು ಮಾಹಿತಿ ತಿಳಿದು ಬಂದಿದೆ.
ಉಡುಪಿ ಜಿಲ್ಲೆಯ ಮಣಿಪಾದಲ್ಲಿ ಇರುವ ಆರ್ ಟಿ ಒ ಕಚೇರಿ ಎಂದರೆ ಅದು ಭ್ರಷ್ಟರು ಇರುವ ಜಾಗ. ಅಲ್ಲಿ ಅಧಿಕಾರಿಗಳಿಂದ ಹಿಡಿದು ಸಿಬ್ಬಂದಿಗಳ ತನಕ ಎಲ್ಲಾ ಲಂಚ ಕೋರರು. ಮಹಿಳೆಯರು ಮತ್ತು ಯುವತಿಯರು ಕೂಡ ಅಲ್ಲಿ ಹಣ ಎಂದರೆ ಬಾಯಿ ಬಾಯಿ ಬಿಡುತ್ತಾರೆ. ಲಂಚ ಕೊಡದೇ ಯಾವುದೇ ಕೆಲಸ ಆಗುವುದಿಲ್ಲ. ಲೋಕಾಯುಕ್ತಾ ಅಧಿಕಾರಿಗಳು ಆರ್ ಟಿ ಒ ಕಚೇರಿಗೆ ದಾಳಿ ನಡೆಸಿ ಎಲ್ಲರನ್ನು ವಿಚಾರಿಸಿದರೆ ಅಲ್ಲಿಯ ಎಲ್ಲಾ ಹಗರಣಗಳು ಬೆಳಕಿಗೆ ಬರುವುದು.





