Home Crime ಹೆಬ್ರಿ : ಪತಿ ಪತ್ನಿ ಜಗಳ ಕೊಲೆಯಲ್ಲಿ ಅಂತ್ಯ…!!

ಹೆಬ್ರಿ : ಪತಿ ಪತ್ನಿ ಜಗಳ ಕೊಲೆಯಲ್ಲಿ ಅಂತ್ಯ…!!

ಹೆಬ್ರಿ : ಪತಿ ಪತ್ನಿ ಜಗಳ ಗಂಡನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಏ. 30ರಂದು ಹೆಬ್ರಿಯ ನಾಲ್ಕೂರಿನ ಮುದ್ದೂರು ಪೇಟೆ‌ ಸಮೀಪ ಮನೆಯಲ್ಲಿ ಸಂಭವಿಸಿದೆ.

ಕೊಲೆಯಾದ ವ್ಯಕ್ತಿಯನ್ನು ಗಣಪತಿ ನಾಯ್ಕ್ ಎಂದು ಗುರುತಿಸಲಾಗಿದೆ. ಇವರು ವಿಪರೀತ ಕುಡಿತದ ಚಟ ಹೊಂದಿದ್ದು ಪ್ರತಿನಿತ್ಯ ಕುಡಿದು ಬಂದು ಹೆಂಡತಿಯೊಂದಿಗೆ ಜಗಳವಾಡುತ್ತಿದ್ದರು.

ಅದೇ ರೀತಿ ಇಂದು ಮಧ್ಯಾಹ್ನ ಸುಮಾರು‌ 2.30 ಗಂಟೆ ವೇಳೆಗೆ ಕುಡಿದು ಹೆಂಡತಿಯೊಂದಿಗೆ ಜಗಳವಾಡಿದ್ದು, ಜಗಳ ಅತಿರೇಕವಾಗಿ ಹೆಂಡತಿ ಕತ್ತಿಯಲ್ಲಿ ಕಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಪರಿಣಾಮವಾಗಿ ಗಂಡ ಗಣಪತಿ ನಾಯ್ಕ್ ಸಾವನಪ್ಪಿದ್ದಾರೆ ಎಂದು ತಿಳಿದು‌ ಬಂದಿದೆ.

ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.‌

ಘಟನೆ ವಿವರ:

ಪಿರ್ಯದಿ ಕೃಷ್ಣ, ನಾಲ್ಕೂರು ಗ್ರಾಮ ಬ್ರಹ್ಮಾವರ ಇವರ ಮನೆಯ ಪಕ್ಕದಲ್ಲಿ ಇವರ ತಮ್ಮ ಗಣಪತಿ ಮನೆ ಮಾಡಿಕೊಂಡು ವಾಸಮಾಡಿಕೊಂಡಿದ್ದು, ಗಣಪತಿ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು, ಪ್ರತಿದಿನ ಕುಡಿದು ಬಂದಾಗ ಮನೆಯಲ್ಲಿ ಹೆಂಡತಿಯೊಂದಿಗೆ ಗಲಾಟೆ ಮಾಡುತ್ತಿದ್ದನು. ದಿನಾಂಕ 30.04.2025ರಂದು ಪಿರ್ಯಾದುದಾರರ ಮನೆಯ ಪಕ್ಕದ ತಂಗಿ ವೀಣಾಳ ಜಾಗದಲ್ಲಿ ಬಾವಿ ತೋಡುವ ಕೆಲಸವಾಗುತ್ತಿದ್ದು, ಸದ್ರಿ ಕೆಲಸಕ್ಕೆ ಪಿರ್ಯಾದುದಾರರ ಅಕ್ಕನ ಮಗನಾದ ಫೃಥ್ವಿರಾಜ್‌ ಹಾಗೂ ಕೆಲಸದವರೊಂದಿಗೆ ಕೆಲಸ ಮಾಡಿಕೊಂಡಿರುವ ಸಮಯ ಪಕ್ಕದಲ್ಲಿ ಇದ್ದ ಗಣಪತಿರವರ ಮನೆಯಲ್ಲಿ ಗಣಪತಿ ಹಾಗೂ ಆತನ ಹೆಂಡತಿ ಜಯಂತಿ ನಡುವೆ ಗಲಾಟೆಯಾಗುತ್ತಿದ್ದು ಮದ್ಯಾಹ್ನ 1.30ಗಂಟೆಗೆ ಪಿರ್ಯಾದುದಾರರು ಹಾಗೂ ಕೆಲಸದವರು ಕೆಲಸ ಮುಗಿಸಿ ಊಟಕ್ಕೆ ಮನೆಗೆ ಹೋಗಿದ್ದು, ಸ್ವಲ್ಪ ಸಮಯದ ನಂತರ ಗಣಪತಿ ಮನೆಯ ಕಡೆಯಿಂದ ಜೋರಾದ ಬೊಬ್ಬೆ ಶಬ್ದ ಕೇಳಿ, ಪಿರ್ಯಾದುದಾರರು ಗಣಪತಿ ಮನೆಯ ಕಡೆ ಓಡಿ ಬಂದಾಗ ಮನೆಯ ಹಿಂಭಾಗ ನಲ್ಲಿಕಟೆ ಬಳಿ ಗಣಪತಿ ಕುತ್ತಿಗೆ ಬಳಿ ಕಡಿದ ಗಾಯವಾಗಿ ಬಿದ್ದುಕೊಂಡಿದ್ದು, ಫೃಥ್ವಿರಾಜನು ಜಯಂತಿಯನ್ನು ಒತ್ತಿ ಹಿಡಿದು ಅವಳ ಕೈಯಲ್ಲಿ ಇದ್ದ ಕತ್ತಿಯನ್ನು ಕಸಿದುಕೊಂಡು ಬೀಸಾಡಿದ್ದು, ಅದಾಗಲೇ ಗಣಪತಿ ಮೃತ ಪಟ್ಟಿರುತ್ತಾನೆ , ದಿನಾಂಕ:30.04.2025 ರಂದುದ ಕುಡಿಯಲು ಹೋಗುವ ಸಲುವಾಗಿ ಹೆಂಡತಿಯಲ್ಲಿ ಹಣ ಕೇಳಿದ ವಿಚಾರದಲ್ಲಿ ಗಣಪತಿ ಹಾಗು ಜಯಂತಿ ಮಧ್ಯ ಗಲಾಟೆಯಾಗಿ ಹೆಂಡತಿ ಜಯಂತಿ ಕತ್ತಿಯಿಂದ ಗಣಪತಿ ಕುತ್ತಿಗೆ ಕಡಿದು ಕೊಲೆ ಮಾಡಿರುವುದಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 24/2025 ಕಲಂ. 103 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿರುತ್ತದೆ.