ಉಡುಪಿ : ಕಟಪಾಡಿ-ಶಿರ್ವ ಮುಖ್ಯ ರಸ್ತೆಯ ಪಂಜಿಮಾರು-ಕೊಡುಗುಡ್ಡೆ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೈಟೆನ್ಷನ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಶನಿವಾರ ಮೇ 2ರಂದು ನಡೆದಿದೆ.
ವಾಹನದಲ್ಲಿದ್ದ ಐವರು ಯುವಕರು ಪವಾಡಸದೃಶವಾಗಿ ಅಪಾಯವಿಲ್ಲದೆ ಪಾರಾಗಿದ್ದಾರೆ.
ಮೂಲಗಳ ಪ್ರಕಾರ, ಉಡುಪಿಯ ವಾಹನ ಶೋರೂಂ ಒಂದರ ಉದ್ಯೋಗಿಗಳಾಗಿದ್ದ ಈ ಯುವಕರು ಬೆಳ್ಮನ್ನಲ್ಲಿ ನಡೆಯುವ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು.
ಪಂಜಿಮಾರು-ಕೊಡುಗುಡ್ಡೆ ಭಾಗದಲ್ಲಿ ಹಾದುಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಬಳಿಕ ಎದುರು ಬದಿಯ ರಸ್ತೆ ಬದಿಯ ಚರಂಡಿಗೆ ಇಳಿದು ನಿಂತಿದೆ. ಡಿಕ್ಕಿಯ ರಭಸಕ್ಕೆ ವಾಹನ ಸಂಪೂರ್ಣವಾಗಿ ಜಖಂಗೊಂಡಿದೆ.






