Home Crime ರಿಕ್ಷಾ ಚಾಲಕ ವಿಷ ಸೇವಿಸಿ ಆತ್ಮಹತ್ಯೆ…!!

ರಿಕ್ಷಾ ಚಾಲಕ ವಿಷ ಸೇವಿಸಿ ಆತ್ಮಹತ್ಯೆ…!!

ಕಾರ್ಕಳ: ನೆಲ್ಲಿಕಾರು ಗ್ರಾಮದ ರಿಕ್ಷಾ ಚಾಲಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ಸತೀಶ ಶೆಟ್ಟಿ(45) ಎಂದು ಗುರುತಿಸಲಾಗಿದೆ. ಇವರು ಸ್ವಂತ ಅಟೋರಿಕ್ಷಾ ಹೊಂದಿದ್ದು, ನೆಲ್ಲಿಕಾರು ಪೇಟೆಯಲ್ಲಿ ಬಾಡಿಗೆ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

ದಿನಾಂಕ 01/05/2026 ರಂದು ಮಧ್ಯಾಹ್ನ ಸುಮಾರು 2:30 ಗಂಟೆಗೆ ಸತೀಶ ಶೆಟ್ಟಿ ಅವರು ಯಾರೊಂದಿಗೋ ಮೊಬೈಲ್‌ನಲ್ಲಿ ಮಾತನಾಡುತ್ತಾ ರಿಕ್ಷಾದಲ್ಲಿ ಮನೆಯಿಂದ ತೆರಳಿದ್ದರು. ಬಳಿಕ ಅವರು ಮನೆಗೆ ಮರಳದೇ ಇದ್ದ ಹಿನ್ನೆಲೆ ಕುಟುಂಬಸ್ಥರು ಮೂಡಬಿದ್ರೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದಕ್ಕೂ ಮೊದಲು, ಮನೆಯ ಸಮೀಪ ವಾಸವಾಗಿದ್ದ ಪದ್ಮಾವತಿ ಎಂಬ ಮಹಿಳೆಗೆ ಗಾಯವಾದ ಪ್ರಕರಣದ ಸಂಬಂಧ ಮೂಡಬಿದ್ರೆ ಪೊಲೀಸರು ಸತೀಶ ಶೆಟ್ಟಿ ಅವರನ್ನು ಹುಡುಕಿಕೊಂಡು ಮನೆಗೆ ಬಂದಿದ್ದರು ಎನ್ನಲಾಗಿದೆ.

ದಿನಾಂಕ 02/05/2026 ರಂದು ಮೊಬೈಲ್ ಲೊಕೇಷನ್ ಆಧರಿಸಿ ಸಂಬಂಧಿಕರು ರೆಂಜಾಳ ಗ್ರಾಮದ ಸೊಂಬೆಟ್ಟು ಪ್ರದೇಶದಲ್ಲಿ ಹುಡುಕಾಟ ನಡೆಸಿದ ವೇಳೆ ಮಣ್ಣು ರಸ್ತೆಯೊಂದರಲ್ಲಿ ಅವರ ಅಟೋರಿಕ್ಷಾ  ನಿಲ್ಲಿಸಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹತ್ತಿರದಲ್ಲೇ ಸತೀಶ ಶೆಟ್ಟಿ ಅವರು ವಿಷ ಸೇವಿಸಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ರಿಕ್ಷಾ ಪಕ್ಕದಲ್ಲೇ ವಾಂತಿ ಮಾಡಿಕೊಂಡಿರುವುದು ಕಂಡುಬಂದಿದೆ.

ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮೂಡಬಿದ್ರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪದ್ಮಾವತಿ ಅವರಿಗೆ ಆಗಿದ್ದ ಗಾಯದ ಪ್ರಕರಣದ ವಿಚಾರಣೆಯಿಂದ ಮನನೊಂದು ಅಥವಾ ಇತರೆ ಕಾರಣಗಳಿಂದ ಸತೀಶ ಶೆಟ್ಟಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.