ಬೆಳ್ತಂಗಡಿ: ಕಿಡಿಗೇಡಿಯೊಬ್ಬ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ನುಗ್ಗಿ ದೇವರ ಮೂರ್ತಿಯನ್ನು ಭಗ್ನಗೊಳಿಸಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ತಡರಾತ್ರಿ ಕಪ್ಪು ಬಣ್ಣದ ಥಾರ್ ವಾಹನದಲ್ಲಿ ದೇವಳದ ಪಕ್ಕದಲ್ಲಿರುವ ಸುಬ್ರಹ್ಮಣ್ಯ ಭಟ್ ಎಂಬುವರ ಮನೆಗೆ ಅಜೇಯ್ ಎಂಬಾತ ನುಗ್ಗಲು ಯತ್ನಿಸಿದ್ದಾನೆ.
ಬಳಂಜ ದೇವಳಕ್ಕೆ ನುಗ್ಗಿ ಮನೆಯವರು ಜೋರು ಭಗ್ನಗೊಳಿಸಿ ವಿಕೃತಿ ಮಾಡಿ ಕಳಿಸಿದ್ದಾರೆ. ಬಳಿಕ ಆತ ಬಳಂಜದ ದೇವರ ಜಳಕದ ಕೆರೆಗೆ ಹಾರಿ ಅಲ್ಲಿಂದ ದೇವಳಕ್ಕೆ ಬಂದು ಹೆಂಚು ತೆಗೆದು ಒಳನುಗ್ಗಿ ಕೊಡಮಣಿತ್ತಾಯ ದೈವದ ಗುಡಿಗೆ ಇಳಿದು ದೈವದ ಮಣೆ ಮಂಚದಲ್ಲಿದ್ದ ಘಂಟಾಮಣಿ ತೆಗೆದಿದ್ದು, ದೇವಳ ತೀರ್ಥ ಮಂಟಪದ ದೇವರ ಮೂರ್ತಿಯನ್ನು ಬಳಿಯ ದೊಡ್ಡ ಘಂಟೆ ಬಾರಿಸಿ, ಗೋಪಾಲಕೃಷ್ಣ ಭಗ್ನಗೊಳಿಸಿರುವುದು. ದೇವರ ಗುಡಿಯೊಳಗೆ ನುಗ್ಗಿ ದೇವರ ವಿಗ್ರಹ ತೆಗೆದು ನೆಲಕ್ಕೆ ಎಸೆದು ಭಗ್ನಗೊಳಿಸಿದ್ದಾನೆ. ಗುಡಿಯೊಳಗಿದ್ದ ದೇವರ ಪರಿಕರಗಳನ್ನು ಚೆಲ್ಲಾಪಿಲ್ಲಿಗೊಳಿಸಿ ವಿಕೃತಿ ಮರೆದಿದ್ದಾನೆ. ಆತನ ಥಾರ್ ವಾಹನ ಸುಬ್ರಹ್ಮಣ್ಯ ಭಟ್ ಅವರ ಮನೆಯಂಗಳದಲ್ಲಿ ಪತ್ತೆಯಾಗಿದೆ.





