ಕುಂದಾಪುರ: ಸಾರ್ವಜನಿಕ ಸ್ಥಳದಲ್ಲಿ ಯುವಕರು ಪರಸ್ಪರ ಜಗಳವಾಡಿ ಶಾಂತಿಗೆ ಭಂಗ ಉಂಟುಮಾಡಿದ ಘಟನೆ ಹಟ್ಟಿಯಂಗಡಿ ಗ್ರಾಮದಲ್ಲಿ ನಡೆದಿದೆ.
ದಿನಾಂಕ 21/04/2026 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ನಿರಂಜನ ಗೌಡ ಬಿ.ಎಸ್. ಅವರು ರಾತ್ರಿ ಸುಮಾರು 11:30 ಗಂಟೆಗೆ ಹಟ್ಟಿಯಂಗಡಿ ಗ್ರಾಮದ ಮಾರಲಾ ದೇವಿ ದೇವಸ್ಥಾನದ ಬಸ್ ಸ್ಟಾಂಡ್ ಬಳಿ ಕೆಲ ಯುವಕರು ಏರುದನಿಯಲ್ಲಿ ಮಾತನಾಡುತ್ತ ಪರಸ್ಪರ ಕೈಕೈಮಿಲಾಯಿಸುತ್ತ ಜಗಳವಾಡುತ್ತಿರುವುದನ್ನು ಗಮನಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದಂತೆ 7 ಮಂದಿ ಯುವಕರು ಓಡಿ ಹೋಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ವಶಕ್ಕೆ ಸಿಕ್ಕವರು ಪ್ರಜ್ವಲ್ (19) ಮತ್ತು ಅಭಿಷೇಕ್ (24) ಎಂದು ಗುರುತಿಸಲಾಗಿದೆ. ಓಡಿ ಹೋದವರಲ್ಲಿ ರೋಹಿತ್, ಕಾರ್ತಿಕ್, ಸಾತ್ವಿಕ್ (ಕೊಟೇಶ್ವರ), ಹಾಗೂ ಶಶಾಂಕ್, ದಿಲೀಪ್, ಸಮರ್ಥ, ಸೃಜನ್ (ಹಟ್ಟಿಕುದ್ರು, ಬಸ್ರೂರು) ಎಂಬವರು ಸೇರಿದ್ದಾರೆಂದು ತಿಳಿದುಬಂದಿದೆ.
ಯುವಕರು ಮಾತಿಗೆ ಮಾತು ಬೆಳೆಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ರೀತಿಯಲ್ಲಿ ಜಗಳವಾಡುತ್ತಿದ್ದ ಹಿನ್ನೆಲೆಯಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





