ರಾಮನಗರ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಅಂಗರಕ್ಷಕ ಮೋನಪ್ಪ ವಿಠಲ ಎಂಬವರನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ರಾಮನಗರ ಜೆಎಂಎಫ್ಸಿ ನ್ಯಾಯಾ ಲಯಕ್ಕೆ ಹಾಜರು ಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಎ.22ರಂದು ಮೋನಪ್ಪನನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು.
ವಿಚಾರಣೆ ವೇಳೆ ಆತ ಎದೆ ನೋವು ಎಂದು ಹೇಳಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ದಲ್ಲಿ ಚೇತರಿಕೆ ಕಂಡ ಬಳಿಕ ಬಂಧಿಸಿದ್ದಾರೆ
ರಿಕ್ಕಿ ರೈ ಅಂಗರಕ್ಷರಾಗಿದ್ದ ಮೋನಪ್ಪ ವಿಠಲ್ ಬಗ್ಗೆ ಗುಮಾನಿ ಬಲವಾಗಿದ್ದು, ಈತ ಬಳಸುತ್ತಿದ್ದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಈತನಲ್ಲಿದ್ದ ಗುಂಡುಗಳಲ್ಲಿ ವ್ಯತ್ಯಾಸವಾಗಿದ್ದು, ಈತನ ನಡವಳಿಕೆ ಬಗ್ಗೆ ಸಂಶಯ ಬಂದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ರಿಕ್ಕಿ ರೈ ಅಂಗರಕ್ಷಕರಿಂದ 7 ಬಂದೂಕುಗಳನ್ನು ಪೊಲೀಸರು ವಶಪಡಿಸಿಕೊಂಡು ತಪಾಸಣೆ ನಡೆಸು ತ್ತಿದ್ದಾರೆ. ಈ ಪೈಕಿ ಯಾರ ಬಂದೂಕಿನಿಂದ ಗುಂಡು ಹಾರಿದೆ ಎಂಬುದು ವಿಧಿವಿಜ್ಞಾನ ಪ್ರಯೋ ಗಾಲಯದ ವರದಿಯಿಂದ ಖಚಿತವಾಗಬೇಕಿದೆ. ಮುತ್ತಪ್ಪ ರೈ ಮಾಜಿ ಆಪ್ತ ರಾಕೇಶ್ ಮಲ್ಲಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೂರನೇ ಆರೋಪಿ ನಿತೀಶ್ ಶೆಟ್ಟಿ ಅವರನ್ನು ವಿಚಾರಣೆ ನಡೆಸ ಲಾಗಿದ್ದು, 2 ಮತ್ತು 4ನೇ ಆರೋಪಿಗಳಾದ ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾ ಮತ್ತು ವೈದ್ಯನಾಥನ್ ಕಾಲಾವಕಾಶ ಕೇಳಿರುವುದಾಗಿ ಎಸ್ಪಿ ತಿಳಿಸಿದ್ದಾರೆ.
ರಾಮನಗರ ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.
