Home Crime ಅಕ್ಕಿ ರಫ್ತು ವ್ಯವಹಾರ : ಕೋಟ್ಯಾಂತರ ರೂಪಾಯಿ ವಂಚನೆ…!!

ಅಕ್ಕಿ ರಫ್ತು ವ್ಯವಹಾರ : ಕೋಟ್ಯಾಂತರ ರೂಪಾಯಿ ವಂಚನೆ…!!

ಉಡುಪಿ: ವ್ಯಕ್ತಿಯೊಬ್ಬರಿಗೆ ಅಕ್ಕಿ ರಫ್ತು ಮಾಡುವ ವಿಚಾರದಲ್ಲಿ ಮೂರು ಮಂದಿ ಕೋಟ್ಯಾಂತರ ರೂಪಾಯಿ ಹಣ ಮುಂಗಡವಾಗಿ ತೆಗೆದುಕೊಂಡು ನಂತರ ವಂಚನೆ ಮಾಡಿದ ಘಟನೆ ನಡೆದಿದೆ.

ಪುಣೆ ನಿವಾಸಿ ಧನಶ್ರೀ ಮನೋಹರ್ ಖಾಲೇ ಎಂಬವರಿಗೆ ಕೋಟ್ಯಾಂತರ ರೂಪಾಯಿ ವಂಚನೆಯಾಗಿದೆ.

ಧನ್ ರಾಜ್ ಹಿರಿಯಣ್ಣ ಕಿದಿಯೂರು, ಅಭಿಷೇಕ್ ರೆಶ್ಮಿ, ಕಾರ್ತಿಕ್ ಎಮ್ ಎಂಬವರು ವಂಚನೆ ಮಾಡಿದ್ದಾರೆ ಎಂದು ಮೂವರ ವಿರುದ್ಧ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಸಾರಂಶ : ಪಿರ್ಯಾದಿದಾರರಾದ ಧನಶ್ರೀ ಮನೋಹರ್‌ ಖಾಲೇ 656 ಪುಣೆ ಸಿಟಿ, ಮಹಾರಾಷ್ಟ್ರ ಇವರು Winwin Exim India ಎಂಬ ಎಕ್ಸ್‌ಪೋರ್ಟ್‌ ಇಮ್‌ಪೋರ್ಟ್‌ ಕಂಪೆನಿಯನ್ನು ಹೊಂದಿರುತ್ತಾರೆ. ಪಿರ್ಯಾದಿದಾರರು 2022 ರಲ್ಲಿ ಅವರ ಸ್ನೇಹಿತರೊಬ್ಬರ ಮೂಲಕ ಆಪಾದಿತರಾದ 1.ಧನ್‌ರಾಜ್‌ ಹಿರಿಯಣ್ಣ ಕಿದಿಯೂರು ಡೈರೆಕ್ಟರ್‌ ಆಫ್‌ PWIP foodtech Private limited company̤, 2. ಅಭಿಷೇಕ್‌ ರೆಶ್ಮಿ Ex employ of PWIP company̤, 3. ಕಾರ್ತಿಕ್‌ ಎಮ್‌. Ex employ of PWIP company̤ ಇವರುಗಳು ನಡೆಸುತ್ತಿರುವ PWIP foodtech Private limited ಎಂಬ ಕಂಪೆನಿಯ ಬಗ್ಗೆ ತಿಳಿದುಕೊಂಡಿದ್ದು, ಆಪಾದಿತರು ಇಂಡೆಂಟಿಂಗ್‌ ಏಜೆಂಟ್‌ಗಳಾಗಿ ರೈಸ್‌ ಎಕ್ಸ್‌ಪೋರ್ಟ್‌ ವ್ಯವಹಾರ ಮಾಡುತ್ತಿರುವ ಬಗ್ಗೆ ತಿಳಿದುಕೊಂಡಿದ್ದು, ಫಿರ್ಯಾದಿದಾರರು ಕರ್ನಾಟಕ ಬೆಂಗಳೂರು ಮಹಾಲಕ್ಷ್ಮೀ ಲೇಔಟ್‌ ನಲ್ಲಿರುವ ಆಪಾದಿತರ ಆಫೀಸ್‌ಗೆ ದಿನಾಂಕ 12/12/2022 ರಂದು ಭೇಟಿ ನೀಡಿ PWIP ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡು, ವ್ಯವಹಾರ ಮಾಡುತ್ತಿದ್ದರು. 2023 ರ ಜೂನ್‌ ತಿಂಗಳಲ್ಲಿ ಪಿರ್ಯಾದಿದಾರರು 1.13 ಕೋಟಿ ಹಣವನ್ನು ಮುಂಗಡವಾಗಿ ಪಾವತಿಸಿರುತ್ತಾರೆ. 2023 ಜುಲೈ ತಿಂಗಳಲ್ಲಿ ಭಾರತ ಸರಕಾರ ಅಕ್ಕಿ ರಫ್ತು ನಿಷೇಧವನ್ನು ಘೋಷಿಸಿದ್ದು, ಆ ಬಳಿಕ ಆಪಾದಿತರ PWIP ಕಂಪೆನಿ ಈ ವರೆಗೆ ಪಿರ್ಯಾದಿದಾರರು ಪಾವತಿಸಿದ ಮುಂಗಡ ಹಣವನ್ನು ಹಿಂದಿರುಗಿಸದೇ ಅವರಿಗೆ ಅಕ್ಕಿಯನ್ನೂ ರಫ್ತು ಮಾಡದೇ ಪಿರ್ಯಾದುದಾರರಿಗೆ ರೂಪಾಯಿ 1,13,00,000/- ವಂಚಿಸಿ ನಂಬಿಕೆ ದ್ರೋಹ ಎಸಗಿರುವುದಾಗಿದೆ.

ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 37/2025 ಕಲಂ: 406, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.