Home Crime ಆಟೋರಿಕ್ಷಾ ಚಾಲಕರ ನಡುವೆ ಹೊಡೆದಾಟ : ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲು…!!

ಆಟೋರಿಕ್ಷಾ ಚಾಲಕರ ನಡುವೆ ಹೊಡೆದಾಟ : ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲು…!!

ಉಡುಪಿ: ನಗರದ ಆಟೋರಿಕ್ಷಾ ಚಾಲಕರ ನಡುವೆ ಹೊಡೆದಾಟ ನಡೆದು ಚಾಲಕರೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ರಿಕ್ಷಾ ಚಾಲಕರ ಎರಡು ತಂಡಗಳ ನಡುವೆ ಜಗಳ ನಡೆದು ದೂರ-ಪ್ರತಿದೂರು‌ ಆಗಿದೆ.

ಉಡುಪಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಪ್ರಸಾದ್‌ (33), ಕುರ್ಕಾಲು, ಉಡುಪಿ ಇವರು ಆಟೋರಿಕ್ಷಾ ಚಾಲನೆಯನ್ನು ಮಾಡಿಕೊಂಡಿದ್ದು, ದಿನಾಂಕ: 25/06/2025 ರಂದು ಸಂಜೆ 6:15 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಟಿ.ಎಂ.ಎ ಪೈ ಆಸ್ಪತ್ರೆ ಬದಿಯ ರಿಕ್ಷಾ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ಅವರ ಆಟೋ ರಿಕ್ಷಾವನ್ನು ನಿಲ್ಲಿಸಿದ್ದ ಸಮಯ ಅಲ್ಲಿಗೆ ರಿಕ್ಷಾದಲ್ಲಿ ಬಂದ ರಘುನಂದನ್‌, ಚಂದ್ರ, ಪಣಿಶೇಖರ್‌, ರವಿ, ವಿಠಲ ಹಾಗೂ ಇತರರು ಪಿರ್ಯಾದಿದಾರರಲ್ಲಿ ಆಟೋರಿಕ್ಷಾ ನಿಲ್ದಾಣದಲ್ಲಿ ಐದು ಆಟೋಗಳಿಂದ ಜಾಸ್ತಿ ಆಟೋ ನಿಲ್ಲಿಸುವಂತಿಲ್ಲ ಎಂದು ಹೇಳಿದಕ್ಕೆ ಪಿರ್ಯಾದಿದಾರರು ಯಾವುದೇ ರಿಕ್ಷಾ ನಿಲ್ದಾಣದಲ್ಲಿ ಯಾರದರೂ ಪರ್ಮಿಟ್‌ ರಿಕ್ಷಾವನ್ನು ನಿಲ್ಲಿಸಬಹುದಾಗಿದೆ ಎಂದು ಹೇಳಿದಕ್ಕೆ ರಘುನಂದನ್‌ ಈ ಕಾನೂನು ನಮ್ಮ ಬಳಿ ನಡೆಯುವುದಿಲ್ಲ ಎಂದು ಹೇಳಿ ಏಕಾಏಕಿ ಕಾಲಿನಿಂದ ಎದೆಗೆ ಒದ್ದಿದ್ದು, ತಪ್ಪಿಸಿಕೊಳ್ಳಲು ಮುಂದಾದಾಗ ಆರೋಪಿತರು ಅಡ್ಡಗಟ್ಟಿದ್ದು, ಅಲ್ಲದೇ ಪಣಿಶೇಖರ್‌ ಎಂಬಾತನು ಸ್ಕ್ರೂ ಡ್ರೈವರ್‌ ನಿಂದ ಪಿರ್ಯಾದಿದಾರರಿಗೆ ಚುಚ್ಚಲು ಬಂದಾಗ ತಪ್ಪಿಸಿಕೊಂಡಿದ್ದು, ಈ ವೇಳೆ ರಘುನಂದನ್‌ ಎಂಬಾತನು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 112/2025, ಕಲಂ: 189(2),191(2),126(2),115(2),351(2),190 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಸಾರಾಂಶ ಪಿರ್ಯಾದಿದಾರರಾದ ರಘುನಂದ(57), ಹೆರ್ಗಾ ಗ್ರಾಮ, ಉಡುಪಿ ಇವರು ಮೂಡನಿಡಂಬೂರು ಗ್ರಾಮದ ಉಡುಪಿ ಟಿ ಎಂ ಎ ಪೈ ಆಸ್ಪತ್ರೆ ಬದಿಯ ಆಟೋರಿಕ್ಷಾ ನಿಲ್ದಾಣದಲ್ಲಿ ಆಟೋ ರಿಕ್ಷಾ ಚಾಲಕನಾಗಿ ಕೆಲಸವನ್ನು ಮಾಡಿಕೊಂಡಿದ್ದು, ದಿನಾಂಕ 25/06/2025 ರಂದು ಸಂಜೆ 5:30 ಗಂಟೆಗೆ ಪಿರ್ಯಾದಿದಾರರು ರಿಕ್ಷಾ ನಿಲ್ದಾಣದಲ್ಲಿರುವಾಗ ಆರು ರಿಕ್ಷಾಗಳು ನಿಂತಿದ್ದು, ಅದೇ ಸಮಯಕ್ಕೆ ಪ್ರಸಾದ್ ನು ಆತನ ಆಟೋರಿಕ್ಷಾ ನಂಬ್ರ KA-20-AA-5156 ರಲ್ಲಿ ರಿಕ್ಷಾ ನಿಲ್ದಾಣಕ್ಕೆ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ಮೊನ್ನೆ ನಿನ್ನ ಮೇಲೆ ಕೇಸು ಹಾಕಿದ್ದೇನೆ, ಇನ್ನೂ ಬುದ್ದಿ ಬಂದಿಲ್ಲವೇ ಎಂದು ಹೇಳಿ ಏಕಾಏಕಿಯಾಗಿ ರಾಡಿನಿಂದ ಪಿರ್ಯಾದಿದಾರರ ಎರಡೂ ಕೈಗಳಿಗೆ ಹೊಡೆದಿದ್ದು, ಕಾಲಿನಿಂದ ತುಳಿದು ಎದೆಗೆ ಕೈಯಿಂದ ಹೊಡೆದು ಬೆದರಿಕೆ ಹಾಕಿ ಹೋಗಿದ್ದು, 10 ನಿಮಿಷ ನಂತರ ಆರೋಪಿತ ಪ್ರಸಾದನು ಇತರ ಆರೋಪಿಗಳಾದ ಚೆನ್ನಕೇಶವ , ರಾಜೇಶ್ ವಿಠ್ಠಲ , ಶರತ್, ರವಿ ಶಂಕರಪುರ ಮತ್ತು ಇನ್ನಿತತರು ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 113/2025, ಕಲಂ:115, 118(1), 351(2), 191(2), 189(2), 190 BNS ರಂತೆ ಪ್ರಕರಣ ದಾಖಲಾಗಿರುತ್ತದೆ.