ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ಮರದ ಕಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಕಾಪು ನಿವಾಸಿ ರವಿ ಎಂದು ತಿಳಿದು ಬಂದಿದೆ.
ಪ್ರಕರಣ ವಿವರ : ಪಿರ್ಯಾದಿದಾರರಾದ ಸುನೀಲ್ (26),ಎಲ್ಲೂರು ಗ್ರಾಮ, ಕಾಪು ಇವರ ಅಣ್ಣ ರವಿ (38) ರವರು ಮರದ ಕೆಲಸ ಮಾಡಿಕೊಂಡಿರುತ್ತಾನೆ, ರವಿಯೂ ಅವಿವಾಹಿನಾಗಿದ್ದು, ಸುಮಾರು ವರ್ಷಗಳಿಂದ ಮಧ್ಯಪಾನ ಮಾಡುವ ಚಟ ಹೊಂದಿದ್ದು ಇತ್ತಿಚಿನ ದಿನಗಳಲ್ಲಿ ಸರಿಯಾಗಿ ಕೆಲಸಕ್ಕೆ ಹೋಗದೇ ವೀಪರಿತ ಮಧ್ಯಾಪಾನ ಸೇವನೆ ಮಾಡಿ ಮನೆಗೆ ಬಂದು ರಾತ್ರಿ ಸಮಯ ಮನೆಯಲ್ಲಿ ಗಲಾಟೆ ಮಾಡುತ್ತಿದ್ದನು, ಇದೇ ಕಾರಣಕ್ಕೆ ಪಿರ್ಯಾದಿದಾರರು ಮತ್ತು ಅಮ್ಮ ಸುಮತಿ ರವರು ಒಂದು ವಾರದಿಂದ ಪ್ರತಿದಿನ ಪಡುಬಿದ್ರಿಯ ತನ್ನ ಅಕ್ಕನ ಮನೆಗೆ ಹೋಗಿ ಅಲ್ಲಿಯೇ ಮಲಗಿ ಬೆಳೆಗ್ಗೆ 8:00 ಗಂಟೆಯ ಸುಮಾರಿಗೆ ವಾಪಾಸ್ಸು ಮನೆಗೆ ಬರುತ್ತಿದ್ದರು ಮನೆಯಲ್ಲಿ ರವಿ ಒಬ್ಬನೇ ಇರುತ್ತಿದ್ದನು, ಸುಮಾರು 5 ದಿನಗಳಿಂದ ರವಿಯೂ ತೀವೃ ಅಸ್ವಸ್ಥನಾಗಿ ಊಟ ಮಾಡದೇ ಇದ್ದು ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ರವಿಯೂ ವೈದ್ಯರು ನೀಡಿದ ಮಾತ್ರೆಗಳನ್ನು ತೆಗೆದುಕೊಳ್ಳದೇ ವಿಪರೀತ ಮಧ್ಯಪಾನ ಮಾಡುತ್ತಿದ್ದನು. ಪಿರ್ಯಾದಿದಾರರ ತಾಯಿ ಸುಮತಿ ರವರು ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ಪಡುಬಿದ್ರಿಯ ತನ್ನ ಮಗಳ ಮನೆಗೆ ಹೋಗಿದ್ದು, ಮನೆಯಲ್ಲಿ ರವಿ ಒಬ್ಬನೇ ಇದ್ದನು ಪಿರ್ಯಾದಿದಾರರು ಸಂಜೆ 4:30 ಗಂಟೆಯ ಸುಮಾರಿಗೆ ಬಾಡಿಗೆ ಹೋಗುವಾಗ ರವಿಯೂ ಮನೆಯ ಹೊರಗೆ ಕುಳಿತ್ತಿದ್ದು ಪಿರ್ಯಾದಿದಾರರು ವಾಪಾಸ್ಸು 5:30 ಗಂಟೆಗೆ ಬಂದು ನೋಡಲಾಗಿ ರವಿಯೂ ಅಡುಗೆ ಕೋಣೆಯಲ್ಲಿನ ಮರದ ಅಡ್ಡಜಂತಿಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುವ ಸ್ಥಿತಿಯಲ್ಲಿದ್ದು ಸ್ಥಳಕ್ಕೆ ಬಂದ ಅಂಬುಲೆನ್ಸ್ ಸಿಬ್ಬಂದಿಯವರು ರವಿಯನ್ನು ಪರೀಕ್ಷಿಸಿ ರವಿಯೂ ಮೃತಪಟ್ಟಿರುವುದಾಗಿ ತಿಳಿಸಿದ್ದು . ರವಿಯೂ ವಿಪರೀತ ಕುಡಿತದ ಚಟದಿಂದ ಅಥವಾ ಇನ್ನಾವೂದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 26/06/2025 ರಂದು ಸಂಜೆ 4:30 ಗಂಟೆಯಿಂದ 5:30 ಗಂಟೆಯ ಮಧ್ಯಾವದಿಯಲ್ಲಿ ಕುತ್ತಿಗೆ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2025, ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.