ಶಂಕರನಾರಾಯಣ: ಉಡುಪಿ ಜಿಲ್ಲೆಯ ಶಂಕರನಾರಾಯಣ ಸಮೀಪ ಮನೆಯೊಂದರ ಪಕ್ಕದಲ್ಲಿ ಕೊಟ್ಟಿಗೆಯೊಳಗೆ ಇದ್ದ ದನವನ್ನು ಕಳ್ಳರು ಕದ್ದಿರುವ ಘಟನೆ ನಡೆದಿದೆ.
ಯಡಮೊಗ್ಗೆ ಗ್ರಾಮದ ರಾಘವೇಂದ್ರ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನಿ ವಿವರ: ಪಿರ್ಯಾದಿದಾರರಾದ ರಾಘವೇಂದ್ರ (42), ಯಡಮೊಗ್ಗೆ ಗ್ರಾಮ ಕುಂದಾಪುರ ಇವರು ದಿನಾಂಕ 02/05/2025 ರಂದು ಎಂದಿನಂತೆ ಮನೆಯ ದನಗಳನ್ನು ಕೊಟ್ಟಿಗೆಯೊಳಗೆ ಕಟ್ಟಿ ರಾತ್ರಿ ಮಲಗುವ ಸಮಯ ಮನೆಯ ಪಕ್ಕದಲ್ಲಿರುವ ತಮ್ಮ ಅಂಗಡಿಯ ಎದುರುಗಡೆ ಅವರ ಒಂದು ದನ ಮಲಗಿದ್ದನ್ನು ನೋಡಿದ್ದು ಮರುದಿನ ದಿನಾಂಕ 03/05/2025 ರಂದು ಬೆಳಿಗ್ಗೆ ಎದ್ದು ಅಂಗಡಿ ಎದುರು ಮಲಗಿದ್ದ ದನವು ಕಂಡು ಬಾರದೇ ಇದ್ದು ಆಗ ಪಿರ್ಯಾದಿದಾರರು ತಮ್ಮ ಅಂಗಡಿಗೆ ಅಳವಡಿಸಿದ ಸಿಸಿ ಕ್ಯಾಮೆರಾಗಳನ್ನು ಚೆಕ್ ಮಾಡಿದ್ದು ದಿನಾಂಕ 03/05/2025 ರಂದು ಬೆಳಗಿನ ಜಾವ 03:00 ಗಂಟೆಯಿಂದ 04:00 ಗಂಟೆಯ ಮಧ್ಯಾವದಿಯಲ್ಲಿ ಯಾರೋ 3 ಜನ ದನ ಕಳ್ಳರು ಬಿಳಿ ಕಾರಿನಲ್ಲಿ ಕಮಲಶಿಲೆ ಕಡೆಯಿಂದ ಬಂದು ಪಿರ್ಯಾದಿದಾರರ ಮನೆಯ ಅಂಗಡಿಯ ಎದುರಿಗೆ ಮಲಗಿದ್ದ ದನವನ್ನು ಕಳ್ಳತನ ಮಾಡಿ ಕಾರಿನಲ್ಲಿ ತುಂಬಿಸಿಕೊಂಡು ಹೊಸಂಗಡಿ ಕಡೆಗೆ ಹೋಗಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2025 ಕಲಂ: 303(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.