ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಯುವಕನೊಬ್ಬ ಮನೆಯಿಂದ ಹೊರಗೆ ಹೋದವನು ಬಾರದೆ ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದ ಯುವಕ ಕಾಂತರಬೆಟ್ಟು ನಿವಾಸಿ ಜಯೇಂದ್ರ ಎಂದು ತಿಳಿದು ಬಂದಿದೆ.
ಜಯೇಂದ್ರ ಕಾಣೆಯಾದ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ತನಿಖೆ ನಡೆಸುತ್ತಿದ್ದಾರೆ.
ಘಟನೆ ವಿವರ: ಪಿರ್ಯಾದಿದಾರರಾದ ಗಣೇಶ್ (42), ವಡೇರ ಹೋಬಳಿ, ಕುಂದಾಪುರ ಇವರ ಅಕ್ಕನ ಮಗ ಜಯೇಂದ್ರ (26) ರವರು ಕುಂದಾಪುರದ ವಡೇರಹೋಬಳಿ ಗ್ರಾಮದ ಬಿಸಿ ರಸ್ತೆ ಕಾಂತರಬೆಟ್ಟು ಎಂಬಲ್ಲಿ ವಾಸವಾಗಿರುತ್ತಾರೆ. ಜಯೇಂದ್ರ ದಿನಾಂಕ 23/06/2025 ರಂದು ಧರ್ಮಸ್ಥಳ ಸಂಘದ ಹಣ ಕಟ್ಟಿಬರುವುದಾಗಿ ಮನೆಯಿಂದ ಹೋದವನು ವಾಪಾಸ್ಸು ಮನೆಗೆ ಬಂದು ಸಂಘದ ಪುಸ್ತಕ ಇಟ್ಟು ಮಧ್ಯಾಹ್ನ 12:30 ಗಂಟೆಗೆ ಮನೆಯಿಂದ ಹೋದವರು 1:30 ಗಂಟೆಗೆ ಜಯೇಂದ್ರನು ತಂದೆಯ ಅಕ್ಕನ ಮಗನಾದ ಕೃಷ್ಣ ರವರಿಗೆ ಮೆಸೇಜ್ ಮಾಡಿ ನಲ್ಲಿ ಮನೆ ಬಿಟ್ ಹೋಗ್ತಿದ್ದೆ, ನನ್ನ ಹುಡ್ಕೊ ಪ್ರಯತ್ನ ಮಾಡ್ಬೇಡಿ ಎಂಬುದಾಗಿ ಮೆಸೇಜ್ ಮಾಡಿ ಕಾಣೆಯಾಗಿರುತ್ತಾರೆ. ಪಿರ್ಯಾದಿದಾರರು ಹಾಗೂ ಮನೆಯವರು ಜಯೇಂದ್ರ ನ ಮೊಬೈಲ್ ಗೆ ಕರೆ ಮಾಡಿದ್ದು ಅದು ಸ್ವಿಚ್ಛ್ ಆಫ್ ಬಂದಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 83/2025 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.