Home Karavali Karnataka ಜ್ಞಾನಗಂಗಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ…!!

ಜ್ಞಾನಗಂಗಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ…!!

ಉಡುಪಿ : ದಿನಾಂಕ 21.06.2025 ರಂದು ಜ್ಞಾನಗಂಗಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ, ಉಪಸ್ಯಾಸಕರಾಗಿ ಹಾಗೂ ವಿದ್ಯಾರ್ಥಿಗಳಿಗೆ ಯೋಗ ತರಬೇತಿದಾರರಾಗಿ ಆಗಮಿಸಿದ ಡಾ | ಎ . ಗಣೇಶ್ ಭಟ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸ್ವಾಸ್ಥ್ಯ, ಆರೋಗ್ಯ, ಚಿತ್ತ ಇದರ ಮಾಹಿತಿಯನ್ನು ಉದಾಹರಣೆಯ ಮೂಲಕ ತಿಳಿಹೇಳಿದ್ದಾರೆ. ಯೋಗ ಎಂದರೇನು? ಯೋಗ ನಮ್ಮ ಜೀವನದಲ್ಲಿ ಹೇಗೆ ಮುಖ್ಯ ಎಂದು ತಿಳಿಸಿದರು.
ಮನಸ್ಥಿತಿ, ಮನಸ್ಸು ಹಾಗೂ ಏಕಾಗ್ರತೆಗೆ ಯೋಗ ಹೇಗೆ ನಮ್ಮ ಜೀವನದಲ್ಲಿ ಪಾತ್ರವಹಿಸುತ್ತದೆ ಎಂದು ಸವಿವರವಾಗಿ ತಿಳಿ ಹೇಳಿದ್ದಾರೆ. ಅಷ್ಟಾಂಗ ಯೋಗ ಮಾನವನ ಮನಸ್ಥಿತಿ, ಬುದ್ಧಿಶಕ್ತಿ, ದೇಹದ ಪರಿಸ್ಥಿತಿಯನ್ನು ಸದಾ ಪ್ರಜ್ಞಾವಸ್ಥೆಯಲ್ಲಿ ಇಡಲು ಸಹಕಾರಿ. ಮನಸ್ಸನ್ನು ಒಗ್ಗೂಡಿಸುವ ಸ್ಥಿತಿಯೇ ಯೋಗ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶ್ರೀ ಎಮ್ ಗೋಪಿಕೃಷ್ಣ ರಾವ್ ಸ್ಥಾಪಕ ಅಧ್ಯಕ್ಷರು ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ಹಾಗೂ ವಕೀಲರು ಇವರು ಮಾತನಾಡಿ ಯೋಗವನ್ನು ನಮ್ಮ ಧೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ವಿದ್ಯಾರ್ಥಿಗಳು ಅವರ ಪರೀಕ್ಷಾ ಫಲಿತಾಂಶವನ್ನು ಉತ್ತಮ ಗುಣಮಟ್ಟದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಹಾಗೂ ಯಾವುದೇ ವ್ಯಕ್ತಿಯು ಯೋಗಾಭ್ಯಾಸ ಮಾಡಿದರೆ ಅವರು ತಾವು ಅಂದುಕೊಂಡ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡಬಹುದು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಲೀನಾ ಎಸ್ ನಾಯ್ಕ ಇವರು ಇವರು ಆಗಮಿಸಿದ ಸರ್ವರಿಗೂ ಸ್ವಾಗತಿಸಿದರು.
ಉದ್ಘಾಟಕರಾಗಿ, ಉಪಸ್ಯಾಸಕರಾಗಿ ಹಾಗೂ ವಿದ್ಯಾರ್ಥಿಗಳಿಗೆ ಯೋಗ ತರಬೇತಿದಾರರಾಗಿ ಆಗಮಿಸಿದ ಡಾ | ಎ . ಗಣೇಶ್ ಭಟ್ ಇವರ ಪತಿಚಯವನ್ನು ಕುಮಾರಿ ತೃಪ್ತಿ ವಾಣಿಜ್ಯ ವಿಭಾಗ ಇವರು ನೆರೆವೇರಿಸಿದರು.ಕುಮಾರಿ ಅಧಿತಿ ಭಟ್ ವಾಣಿಜ್ಯ ವಿಭಾಗ ಇವರು ಸರ್ವರಿಗೂ ಧನ್ಯವಾದಗಳು ಸಲ್ಲಿಸಿದರು.

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಕುಮಾರಿ ರಕ್ಷಿತ ವಾಣಿಜ್ಯ ವಿಭಾಗ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಎಲ್ಲಾ ಉಪನ್ಯಾಸಕರು ಹಾಗೂ ಭೋದಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.