Home Crime ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಕಂದಾಯ ಅಧಿಕಾರಿ ಇವರಿಂದ ಕಾನೂನುಬಾಹಿರ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಾಥ್...

ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಕಂದಾಯ ಅಧಿಕಾರಿ ಇವರಿಂದ ಕಾನೂನುಬಾಹಿರ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಾಥ್ ಹಾಗೂ ಕಾನೂನು ಉಲ್ಲಂಘನೆಯೇ.?…!!

ಕುಂದಾಪುರ : ಪುರಸಭೆಯ ಇತಿಹಾಸದಲ್ಲಿ ಹಿಂದೆಂದೂ ನಡೆಯದಿರುವ ಕಾನೂನು ಬಾಹಿರ ಕಟ್ಟಡ ಹಾಗೂ ಕಾನೂನು ಉಲ್ಲಂಘನೆ ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಯಿಂದ ಹಾಗೂ ಕಂದಾಯ ಅಧಿಕಾರಿಂದ ನಡೆದಿದೆ ಎಂದು ಹೇಳಿದರೆ ತಪ್ಪಾಗಲಾರದು.

ಮುಖ್ಯಾಧಿಕಾರಿಗಳಿಗೆ ಹಾಗೂ ಕಂದಾಯ ಅಧಿಕಾರಿಗಳಿಗೆ ತನ್ನದೇ ಆದ ಇತಿಮಿತಿ ಅಂತ ಇರುತ್ತದೆ ತನ್ನ ಇತಿಮಿತಿಯೊಳಗೆ ಹಾಗೂ ಕಾನೂನಿನ ಚೌಕಟ್ಟಿನೊಳಗೆ ಅಧಿಕಾರಿಗಳು ತಮ್ಮ ಕೆಲಸ ಮಾಡಿ ಕೊಡುವಂತದ್ದು ಅವರ ಆದ್ಯ ಕರ್ತವ್ಯವಾಗಿದ್ದು ಅದನ್ನು ಪಾಲಿಸಬೇಕಾದದ್ದು ಅಧಿಕಾರಿಗಳ ಕರ್ತವ್ಯವೂ ಆಗಿರುತ್ತದೆ ಇದಕ್ಕೆ ತದ್ವಿರುದ್ಧವಾಗಿ ಕುಂದಾಪುರ ಪುರ ಪುರಸಭೆ ಮುಖ್ಯಾಧಿಕಾರಿ ಆನಂದ ಜೆ ಹಾಗೂ ಕಂದಾಯ ಅಧಿಕಾರಿ ಅಂಜನಿ ಗೌಡ ನಡೆದುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

ಕುಂದಾಪುರ ಪುರಸಭಾ ಅಧ್ಯಕ್ಷ ಕೆ ಮೋಹನ್ ದಾಸ್ ಶೆಣೈ ಇವರ ಮನೆಯ ಕಾನೂನು ಬಾಹಿರ ಹಾಗೂ ಅಕ್ರಮ ಮನೆ ಮಹಡಿಯ ಕಟ್ಟಡದ ಪ್ರಕರಣವು ಜನಪ್ರತಿನಿಧಿ ನ್ಯಾಯಾಲಯವಾದ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದ್ದು ಈ ತನಿಖೆ ನಡೆಯುವ ಸಂದರ್ಭದಲ್ಲಿ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಅಕ್ರಮ ಕಟ್ಟಡವನ್ನು ಸಕ್ರಮ ಮಾಡಿ ಆ ಕಟ್ಟಡಕ್ಕೆ ಬೇಕಾದಂತಹ ತೆರಿಗೆಯನ್ನು ವಿಧಿಸಿ ಬಿ ಖಾತೆಯನ್ನು ಮಾಡಲು ನಿರ್ಧರಿಸುತ್ತಾರೆ.

ಈಗಾಗಲೇ ಅರ್ಜಿದಾರರು ಎಲ್ಲಾ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ದಾಖಲೆಯನ್ನು ಒದಗಿಸಿರುತ್ತಾರೆ. ಮುಖ್ಯಾ ಧಿಕಾರಿಗಳೇ ಹಾಗೂ ಕಂದಾಯ ಅಧಿಕಾರಿಗಳೇ ಪ್ರಕರಣವು ಲೋಕಾಯುಕ್ತ ನ್ಯಾಯಾಲಯದಲ್ಲಿ ಇರುವಾಗ ನ್ಯಾಯಾಲಯದ ತೀರ್ಮಾನವಾಗದೆ ಕಾನೂನು ಬಾಹಿರ ಹಾಗೂ ಅಕ್ರಮ ಕಟ್ಟಡಕ್ಕೆನಿಮಗೆ ಬಿ ಖಾತೆ ನೀಡಲು ಕಾನೂನಿನಲ್ಲಿ ಅವಕಾಶವಿದೆಯೇ? ಅಧಿಕಾರಿಯಾಗಿ ತಾವುಗಳು ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ ಹಾಗೆ ಅಲ್ಲವೇ? ಸಾಮಾನ್ಯ ಜನರು ಬಂದರೆ ಅವರ ಪ್ರಕರಣ ಲೋಕಾಯುಕ್ತದಲ್ಲಿ ಇದ್ದದ್ದೇ ಆದಲ್ಲಿ ತಾವುಗಳು ಸಾಮಾನ್ಯ ಜನರಿಗೆ ನೋಡಿ ನಿಮ್ಮ ಪ್ರಕರಣ ಲೋಕಾಯುಕ್ತದಲ್ಲಿದೆ ಆದ್ದರಿಂದ ಯಾವುದೇ ಕೆಲಸ ಮಾಡಿಕೊಡಲು ನಮ್ಮಿಂದಆಗುವುದಿಲ್ಲ ಲೋಕಾಯುಕ್ತ ಕಚೇರಿಯಲ್ಲಿ ನಿಮ್ಮ ತೀರ್ಮಾನವಾಗಲಿ. ತೀರ್ಮಾನವಾದ ಬಗ್ಗೆ ನಮ್ಮ ಪುರಸಭಾ ಕಚೇರಿಗೆ ಲಿಖಿತ ರೂಪದಲ್ಲಿ ಉತ್ತರ ಬರಲಿ ತದನಂತರ ನೋಡೋಣ ಎಂದು ಹೇಳಿ ಕಳುಹಿಸುತ್ತೀರಿ ಈ ಮಾತನ್ನು ಪುರಸಭೆಯ ಕಂದಾಯ ಅಧಿಕಾರಿಯಾದ ಅಂಜನಿ ಗೌಡ ಬಂದ ಜನತೆಗೆ ಹೇಳಿರುವ ಮಾತು.

ಹೀಗಿರುವಾಗ ಪ್ರಕರಣ ಲೋಕಾಯುಕ್ತ ನ್ಯಾಯಾಲಯದಲ್ಲಿ ಇರುವಾಗ ಕುಂದಾಪುರ ಪುರಸಭಾ ಅಧ್ಯಕ್ಷರಾದ ಕೆ ಮೋಹನ್ ದಾಸ ಶಣೈ ಇವರ ಅಕ್ರಮ ಕಟ್ಟಡಗಳಿಗೆ ಬಿ ಖಾತೆ ಮಾಡಿ ಕೊಡುವುದು ಎಷ್ಟರಮಟ್ಟಿಗೆ ಸರಿ? ನಿಮ್ಮ ಪ್ರಾಮಾಣಿಕತೆಗೆ ಹಾಗೂ ನಿಮ್ಮ ವ್ಯಕ್ತಿತ್ವಕ್ಕೆ ನೇರ ನುಡಿಯ ಮಾತುಗಳಿಗೆ ಧಕ್ಕೆ ಬರುವುದಿಲ್ಲವೇ? ನಿಮ್ಮ ತತ್ವ ಸಿದ್ಧಾಂತಗಳಿಗೆ ನೀವು ತಿಲಾಂಜಲಿ ಇಟ್ಟುಕೊಂಡ ಹಾಗೆ ಅಲ್ಲವೇ? ಯೋಚಿಸಿ ಮುಂದಿನ ತೀರ್ಮಾನ ಕೈಗೊಳ್ಳಿ ಎಂದು ನೊಂದ ಕುಂದಾಪುರ ಸಮಸ್ತ ನಾಗರಿಕರು ಪ್ರೈಮ್ ಟಿವಿ ಗೆ ಆರೋಪಿಸಿದ್ದಾರೆ.