Home Karavali Karnataka ವಿಷಜಂತು ಕಡಿದು ಮಹಿಳೆಯೊಬ್ಬರು ಮೃತ್ಯು…!!

ವಿಷಜಂತು ಕಡಿದು ಮಹಿಳೆಯೊಬ್ಬರು ಮೃತ್ಯು…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಮಹಿಳೆಯೊಬ್ಬರಿಗೆ ತೋಟಕ್ಕೆ ಹೋದಾಗ ವಿಷಜಂತು ಕಡಿದು ಮೃತಪಟ್ಟ ಘಟನೆ ಸಂಭವಿಸಿದೆ.

ಮೃತಪಟ್ಟ ಮಹಿಳೆ ಅನ್ನಿ ಮೇರಿ ಎಂದು ತಿಳಿದು ಬಂದಿದೆ.

ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಅಂಕಿತಾ ಭುತೆಲ್ಲೊ (27),ಹೆಮ್ಮಾಡಿ ಗ್ರಾಮ ಕುಂದಾಪುರ ಇವರ ತಾಯಿ ಅನ್ನಿ ಮೇರಿ (70) ರವರು ದಿನಾಂಕ 17/06/2025 ರಂದು 16:00 ಗಂಟೆಗೆ ಅವರ ಮನೆಯ ಬಳಿ ತೋಟಕ್ಕೆ ಹೋದಾಗ ಯಾವುದೋ ವಿಷಜಂತು ಕಡಿದು ಅಸ್ವಸ್ಥರಾಗಿದ್ದು ಕೂಡಲೇ ಅವರನ್ನು ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದ ಅನ್ನಿ ಮೇರಿ ರವರು ಚಿಕಿತ್ಸೆ ಫಲಕಾರಿಯಾಗದೇ 18:26 ಗಂಟೆಗೆ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 32/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.
ಇತರ ಪ್ರಕರಣ