Home Crime ಅಪರಿಚಿತರಿಂದ ತಲವಾರು ದಾಳಿ…!!

ಅಪರಿಚಿತರಿಂದ ತಲವಾರು ದಾಳಿ…!!

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಸಜೀಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣ ಬಳಿ ಕಳೆದ ಬುಧವಾರ ಬೈಕ್‌ನಲ್ಲಿ ಬಂದ ಅಪರಿಚಿತರು ತಲವಾರು ಬೀಸಿದ ಘಟನೆ ನಡೆದಿದ್ದು, ಸಜಿಪಮುನ್ನೂರು ನಿವಾಸಿ ಉಮರ್ ಫಾರೂಕ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಕಳೆದ ಬುಧವಾರ ಉಮ್ಮರ್ ಫಾರೂಕ್ ಮನೆಯಿಂದ ಜೀಪ್‌ನಲ್ಲಿ ದೇರಳಕಟ್ಟೆ ಕಡೆಗೆ ತೆರಳುತ್ತಾ, ಸಜೀಪನಡು ಗ್ರಾಮದ ದೇರಾಜೆ ಬಸ್‌ ನಿಲ್ದಾಣ ಬಳಿ ತಲುಪಿದಾಗ, ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದು, ಹಿಂಬದಿ ಸವಾರನಾಗಿ ಕುಳಿತಿದ್ದಾತ ತಲವಾರು ಬೀಸಿದ್ದಾನೆ.

ಈ ವೇಳೆ ತಲವಾರು ತಾಗಿ ಉಮ್ಮರ್ ಫಾರೂಕ್ ಅವರ ವಾಹನದ ಸೈಡ್ ಮಿರರ್ ಗಾಜು ಒಡೆದಿದೆ ಎಂದು ದೂರು ದಾಖಲಾಗಿದೆ.