ಬಿಹಾರ: ಇತ್ತೀಚಿನ ದಿನಗಳಲ್ಲಿ ಇನ್ನೇನು ತಾಳಿ ಕಟ್ಟಬೇಕು ಎನ್ನುವ ಸಂದರ್ಭದಲ್ಲಿ ಮದುವೆಗಳು ಮುರಿದು ಬೀಳುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಹಿಂದೆ ಹೆತ್ತವರ ಪರಿಶ್ರಮ, ಅನೇಕರ ಕಣ್ಣೀರು, ಕನಸು ಇರುವ ಕುರಿತು ಹುಡುಗ ಹುಡುಗಿಯರಿಗೆ ತಿಳಿಯದೆ ಇರುವುದು ನಿಜಕ್ಕೂ ವಿಷಾದನೀಯ.
ಇದೀಗ ಅಂತದ್ದೇ ಒಂದು ಘಟನೆ ಬೆಳಕಿಗೆ ಬಂದಿದ್ದು ಹುಡುಗನ ಕೈ ನಡುಗುತ್ತೇ ನಾನು ಮದುವೆಯಾಗಲ್ಲ ಎಂದು ವಧು ಕೊನೆ ಕ್ಷಣದಲ್ಲಿ ಮದುವೆ ಕ್ಯಾನ್ಸಲ್ ಮಾಡಿಸಿರುವ ಪ್ರಸಂಗ ನಡೆದಿದೆ.
ಹೌದು, ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮದುವೆಯಾಗುವ ಸಂಭ್ರಮದಲ್ಲಿದ್ದ ವರ ದೊಡ್ಡ ಮೆರವಣಿಗೆಯ ವಧುವಿನ ಮನೆಗೆ ಆಗಮಿಸಿದ್ದ.ಆ ಬಳಿಕ ಮದುವೆ ಕಾರ್ಯಕ್ರಮಗಳು ಕೂಡ ಅದ್ಧೂರಿಯಾಗಿ ನೆರವೇರುತ್ತಿದ್ದವು. ಹೀಗೆ ಎಲ್ಲಾ ಶಾಸ್ತ್ರ ಸಂಪ್ರದಾಯಗಳು ಚೆನ್ನಾಗಿಯೇ ನಡೆಯುತ್ತಿತ್ತು.
ಬಳಿಕ ಮದುವೆಯ ಪ್ರಮುಖ ಆಚರಣೆಯಾದ ‘ಸಿಂದೂರ್ ದಾನ’ ಅಂದ್ರೆ ಹಣೆಗೆ ಕುಂಕುಮ ಹಚ್ಚುವ ವೇಳೆ ವರನ ಕೈ ನಡುಗಲು ಪ್ರಾರಂಭಿಸಿದ್ದನ್ನು ಗಮನಿಸಿದ ವಧು ಕೋಪಗೊಂಡಿದ್ದಾಳೆ. ಹೀಗಾಗಿ ಆಕೆ ನಾನು ಮದುವೆಯಾಗುವುದಿಲ್ಲ, ಹುಡುಗನ ಕೈ ನಡುಗುತ್ತದೆ ಎಂದು ಕೊನೆ ಕ್ಷಣದಲ್ಲಿ ಮದುವೆ ಕ್ಯಾನ್ಸಲ್ ಮಾಡಿಸಿದ್ದಾಳೆ.
ಈ ವೇಳೆ ಆಕೆಯ ಕುಟುಂಬದವರು ವಧುವನ್ನು ಮದುವೆಗೆ ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ, ಆಕೆ ತನ್ನ ನಿರ್ಧಾರದಲ್ಲಿ ದೃಢವಾಗಿದ್ದಳು ಮತ್ತು ಮದುವೆಯನ್ನು ನಿರಾಕರಿಸಿದಳು. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಎರಡೂ ಕುಟುಂಬಗಳನ್ನು ಭಭುವಾ ಪೊಲೀಸ್ ಠಾಣೆಗೆ ಕರೆಸಿ ದೀರ್ಘ ಚರ್ಚೆ ನಡೆಸಿದ ನಂತರವೂ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.