Home Crime ವಾಹನವೊಂದು ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆದು ಮೃತ್ಯು…!!

ವಾಹನವೊಂದು ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆದು ಮೃತ್ಯು…!!

ಉಡುಪಿ: ನಗರದಲ್ಲಿ ಪಾದಚಾರಿಯೊಬ್ಬರಿಗೆ ವಾಹನವೊಂದು ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿ ಮುರಾರಿ ಪುತ್ತಿಗೆ ಎಂದು ತಿಳಿದು ಬಂದಿದೆ.

ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ವಿವರ : ಪಿರ್ಯಾದಿ ಪ್ರವೀಣ ಕುಮಾರ್‌ (47 ಕುಂಜಿಬೆಟ್ಟು ಅಂಚೆ, ಶಿವಳ್ಳಿ ಗ್ರಾಮ ಇವರು ದಿನಾಂಕ 08-06-2025 ರಂದು ಸಂಜೆ 6-55 ಗಂಟೆ ವೇಳೆಗೆ ಶಾರದ ಕಲ್ಯಾಣ ಮಂಟಪದ ರಿಕ್ಷಾ ಪಾರ್ಕಿಂಗ್‌ ನಲ್ಲಿ ರಿಕ್ಷಾ ಪಾರ್ಕಿಂಗ್‌ ಮಾಡಿರುವ ಸಮಯದಲ್ಲಿ ಮುರಾರಿ ಪುತ್ತಿಗೆ ರವರು ಶಾರದ ಕಲ್ಯಾಣ ಮಂಟಪದ ಕಡೆಯಿಂದ ಬೀಡಿನಗುಡ್ಡೆ ಕಡೆ ಹಾದು ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಸ್ವಲ್ಪ ಸಮಯದಲ್ಲಿ ಸಂಜೆ ಸುಮಾರು 7-00 ಗಂಟೆ ವೇಳೆಗೆ ಶಿವಳ್ಳಿ ಗ್ರಾಮದ ಶಾರದಾ ಕಲ್ಯಾಣ ಮಂಟಪದ ಬಳಿಯ ಸುದೀಂದ್ರ ತೀರ್ಥ ರಸ್ತೆ ಕ್ರಾಸ್‌ ಬಳಿ ಯಾವುದೋ ವಾಹನದ ಚಾಲಕನು ಆತನ ವಾಹನವನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಮುರಾರಿ ಪುತ್ತಿಗೆ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವೃ ಸ್ವರೂಪದ ರಕ್ತ ಗಾಯ ಆದವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದೊಯ್ದಲ್ಲಿ ಪರೀಕ್ಷಿಸಿದ ವೈದ್ಯರು ಮುರಾರಿ ಪುತ್ತಿಗೆ ರವರು ದಾರಿ ಮದ್ಯೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆ ಅಪರಾಧ ಕ್ರಮಾಂಕ 69/2025 ಕಲಂ: 281, 106 BNS- 2023 134(A)(B) r/w 187 IMV Act ನಂತೆ ಪ್ರಕರಣ ದಾಖಲಾಗಿರುತ್ತದೆ