Home Crime ಪಾದಚಾರಿಯೊಬ್ಬರಿಗೆ ಲಾರಿ ಹೊಡೆದು ಪರಾರಿ : ವ್ಯಕ್ತಿಯೊಬ್ಬರು ಸಾವು…!!

ಪಾದಚಾರಿಯೊಬ್ಬರಿಗೆ ಲಾರಿ ಹೊಡೆದು ಪರಾರಿ : ವ್ಯಕ್ತಿಯೊಬ್ಬರು ಸಾವು…!!

ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪ ಪಾದಚಾರಿಯೊಬ್ಬರಿಗೆ ಲಾರಿಯೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ.ಗಂಭೀರ ಗಾಯಗೊಂಡ ವ್ಯಕ್ತಿಯು ಮೃತಪಟ್ಟಿದ್ದಾರೆ.

ಮೃತಪಟ್ಟವರು ಮೂಳೂರು ಫಿಶರೀಶ್‌ ರೋಡ್‌ನ ನಿವಾಸಿ ಧನಂಜಯ ಎಂದು ತಿಳಿದು ಬಂದಿದೆ.

ಈ ಅಪಘಾತ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣದ ವಿವರ : ಪಿಯಾ೯ದಿದಾರರಾದ ಚಿತ್ತನ್‌ ಕುಮಾರ್‌ (36), ಮೂಳೂರು, ಕಾಪು ಇವರು ದಿನಾಂಕ 03/06/2025 ರಂದು ಎಂದಿನಂತೆ ಕೆಲಸ ಮುಗಿಸಿ ಶ್ರೀ ಸವೇ೯ಶ್ವರ ಬೊಬ್ಬಯ೯ ಕೊಡಮಣಿತ್ತಾಯ ದೈವಸ್ಥಾನದ ಹಿಂಬದಿ ಸ್ನೇಹಿತರೊಂದಿಗೆ ಕೂಡಿ ಕ್ರಿಕೆಟ್‌ ಆಟವಾಡಿ ಬಳಿಕ ಪ್ರಮೋದ್‌, ದೀರೇಶ್‌ ಡಿ.ಪಿ ಯವರೊಂದಿಗೆ ದೈವಸ್ಥಾನದ ಬಳಿ ಇರುವ ಗೂಡಂಗಡಿ ಬಳಿ ಕುಳಿತು ಮಾತನಾಡುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ 66 ಮಂಗಳೂರು-ಉಡುಪಿ ಏಕಮುಖ ರಸ್ತೆಯಲ್ಲಿ ಸಮಯ ಸುಮಾರು 8:50 PM ಗಂಟೆಗೆ ಲಾರಿಯೊಂದು ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಂತೆ ಕಂಡು ಬಂದಿದ್ದು ಪಿಯಾ೯ದಿದಾರರು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಪರಿಚಯಸ್ಥರಾದ 46 ವಷ೯ ಪ್ರಾಯದ ಮೂಳೂರು ಫಿಶರೀಶ್‌ ರೋಡ್‌ನ ನಿವಾಸಿ ಧನಂಜಯ ಆಗಿರುತ್ತಾರೆ. ಅವರಿಗೆ ತಲೆಯ ಭಾಗ, ಕೈ, ಕಾಲು, ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರ ತರದ ಜಜ್ಜಿದ ಗಾಯ ಹಾಗೂ ತಲೆಯು ಒಡೆದು ಹೋದ ಸ್ಥಿತಿಯಲ್ಲಿ ಕಂಡು ಬಂದಿದ್ದು ನಂತರ ಡಿಕ್ಕಿ ಹೊಡೆದ ಲಾರಿಯ ಚಾಲಕನು ತನ್ನ ಲಾರಿಯನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದಂತೆ ಮಾಡಿದ್ದು ನಂತರ ಅಲ್ಲಿಂದ ವಾಹನ ಸಮೇತ ಪರಾರಿಯಾಗಿರುತ್ತಾನೆ. ಈ ವೇಳೆ ಸದ್ರಿ ಲಾರಿಯ ನಂಬ್ರ ನೋಡಲಾಗಿ ಅದರ ನಂಬ್ರ KA-16-B-7025 ಆಗಿರುತ್ತದೆ. ಪಿಯಾ೯ದಿದಾರರು ಕೂಡಲೇ ಉಡುಪಿ ಜಿಲ್ಲಾ ಸಕಾ೯ರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯಾಧಿಕಾರಿಗಳು ಧನಂಜಯ ರವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 80/2025 ಕಲಂ: 281, 106 BNS ಮತ್ತು 134(a&b) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.