Home Crime ಅಕ್ರಮ ಮರಳು ಸಾಗಾಟ : ಟಿಪ್ಪರ್ ವಶಕ್ಕೆ…!!

ಅಕ್ರಮ ಮರಳು ಸಾಗಾಟ : ಟಿಪ್ಪರ್ ವಶಕ್ಕೆ…!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ ಟಪ್ಪರ್ ಲಾರಿಯನ್ನು ಮರಳು ಸಹಿತ ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ : ದಿನಾಂಕ 21/05/2025 ರಂದು ಸಂದೀಪ್‌ ಕುಮಾರ್‌ ಶೆಟ್ಟಿ, ಪೊಲೀಸ್‌ ಉಪನಿರೀಕ್ಷಕರು(ಕಾ&ಸು),ಕಾರ್ಕಳ ನಗರ ಪೊಲೀಸ್‌ ಠಾಣೆ ಇವರಿಗೆ ಬಂದ ಮಾಹಿತಿಯಂತೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಸರ್ವಜ್ಜ ಸರ್ಕಲ್ ಬಳಿ ಟಿಪ್ಪರ ಲಾರಿಯ ಚಾಲಕ ಮಂಜುನಾಥ ಮಾಲೀಕ ವಿರಾಜ್ ಹಾಗೂ ಗುರುಪುರದ ಶ್ರೀಕರ ಇವರು ಸಂಘಟಿತರಾಗಿ ಮಂಗಳೂರಿನ ಗುರುಪುರ ಸರಕಾರಿ ಹೊಳೆಯಿಂದ ಅಕ್ರಮವಾಗಿ ಕಳವು ಮಾಡಿದ 2 ಯುನಿಟ್ ಮರಳನ್ನು KA-20-D-9109 ನೇ ನಂಬ್ರದ ಟಿಪ್ಪರ ಲಾರಿಯಲ್ಲಿ ಯಾವುದೇ ಪರವಾನಿಗೆ ಹೊಂದದೇ ಸಾಗಾಟ ಮಾಡುತ್ತಿರುವಾಗ ಮರಳು ಸಮೇತ ಟಿಪ್ಪರ ಲಾರಿಯನ್ನು ವಶಪಡಿಸಿಕೊಂಡಿರುವುದಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 73/2025 ಕಲಂ: 303(2)112(2) ಜೊತಗೆ 3(5) BNS 4(1-a̧) 21(4) MMRD ACT 1957 66 r/w 192 (A) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.