ಉಡುಪಿ: ನಗರದ ಸಮೀಪ ವ್ಯಕ್ತಿಯೊಬ್ಬರು ಮನೆಗೆ ವಾಪಸ್ಸು ಬಾರದೇ ನಾಪತ್ತೆಯಾದ ಘಟನೆ ಸಂಭವಿಸಿದೆ.
ನಾಪತ್ತೆಯಾದ ವ್ಯಕ್ತಿ ಸ್ವಾಮಿ ಎಸ್ ಹೆಚ್ ಎಂದು ತಿಳಿದು ಬಂದಿದೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಿರ್ಯಾದುದಾರ ಪುಷ್ಪಾ ಎನ್ , ಪ್ರಾಯ : 41 ವರ್ಷ, ಗಂಡ : ನಿರ್ವಾಣ ಸ್ವಾಮಿ ಎಸ್ ಹೆಚ್, ವಾಸ : ಮನೆ ನಂಬ್ರ 5-98 ಎಂ ಎಂ ಶಾಲೆಯ ಹತ್ತಿರ 76 ಬಡಗುಬೆಟ್ಟು ಗ್ರಾಮ ಇವರ ಗಂಡ ನಿರ್ವಾಣ ಸ್ವಾಮಿ ಎಸ್ ಹೆಚ್ (53) ರವರು TERRIER SECURITY ಸಂಸ್ಥೆಯಲ್ಲಿ ಸೂಪರ್ ವೈಸರ್ ಆಗಿ ಕೆಲಸವನ್ನು ಮಾಡಿಕೊಂಡಿರುತ್ತಾರೆ. ದಿನಾಂಕ : 02/01/2026 ರಂದು ರಾತ್ರಿ 8:30 ಗಂಟೆಗೆ ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಬ್ಯಾಸೆಲ್ ಮಿಷನ್ ಹಾಲ್ ನಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ಫಿರ್ಯಾದುದಾರರು ಊಟ ಮಾಡುವ ಸಮಯ ನಿರ್ವಾಣ ಸ್ವಾಮಿ ರವರನ್ನು ನೋಡಿರುತ್ತಾರೆ. ಫಿರ್ಯಾದುದಾರರು ತನ್ನ ಗಂಡ ವಾಪಸ್ಸು ಮಣಿಪಾಲದ ಕೆಎಂಸಿ ಗೆ ಕೆಲಸಕ್ಕೆ ಹೋಗಿರುತ್ತಾರೆ ಎಂದು ಭಾವಿಸಿರುತ್ತಾರೆ. ದಿನಾಂಕ : 03/01/2026 ರಂದು ಫಿರ್ಯಾದುದಾರರು ತನ್ನ ಗಂಡ ಕರ್ತವ್ಯದಲ್ಲಿ ಇರಬಹುದೆಂದೂ ತಿಳಿದಿದ್ದು, ದಿನಾಂಕ : 04/01/2026 ರಂದು ಸಂಜೆ 7:00 ಗಂಟೆಯಾದರೂ ವಾಪಸ್ಸು ಮನೆಗೆ ಬಾರದೇ ಇದ್ದುದ್ದರಿಂದ ಮಣಿಪಾಲ ಫೀಲ್ಡ್ ಆಫೀಸರ್ ಆದ ಸತೀಶ್ ರವರಿಗೆ ಕರೆ ಮಾಡಿ “ಗಂಡನ ಬಗ್ಗೆ ವಿಚಾರಿಸಿದಕ್ಕೆ” ಅವರು ನಾಲ್ಕು ದಿನ ರಜೆ ಹಾಕಿರುತ್ತಾರೆ ಎಂದು ತಿಳಿಸಿರುತ್ತಾರೆ. ನಾಲ್ಕು ದಿನಗಳು ಕಳೆದರೂ ಫಿರ್ಯಾದುದಾರರ ಗಂಡ ಕೆಲಸಕ್ಕೂ ಹೋಗದೇ ಮನೆಗೂ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 008/2026 ಕಲಂ ಗಂಡಸು ಕಾಣೆ ರಂತೆ ಪ್ರಕರಣ ದಾಖಲಾಗಿರುತ್ತದೆ.



