Home Karnataka News ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಆ.15ರಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರನ್ನು ನೇಮಕ…!!

ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಆ.15ರಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರನ್ನು ನೇಮಕ…!!

ಬೆಂಗಳೂರು: ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಆ.15ರಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರನ್ನು ನೇಮಕ ಮಾಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ.

ಅದರಂತೆ ಉಡುಪಿ ಜಿಲ್ಲೆಯ ಉಸ್ತುವಾರಿ ಆಗಿ ನೇಮಕಗೊಂಡ ಬಸವಂತಪ್ಪನವರು ಆ.15 ರಂದು ಉಡುಪಿಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ.

ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ — ತುಮಕೂರು, ಸಚಿವರಾದ ಕೆ. ಎಚ್. ಮುನಿಯಪ್ಪ — ಬೆಂಗಳೂರು ಗ್ರಾಮಾಂತರ, ಕೆ.ಜೆ. ಜಾರ್ಜ್ — ಚಿಕ್ಕಮಗಳೂರು, ಎಂ. ಬಿ. ಪಾಟೀಲ್ — ವಿಜಯಪುರ, ರಾಮಲಿಂಗಾರೆಡ್ಡಿ — ಕೋಲಾರ, ಸತೀಶ್ ಜಾರಕಿಹೊಳಿ — ಬೆಳಗಾವಿ, ಪ್ರಿಯಾಂಕ್ ಖರ್ಗೆ — ಕಲಬುರಗಿ, ಯು.ಟಿ. ಖಾದರ್ — ದಕ್ಷಿಣ ಕನ್ನಡ, ಈಶ್ವರ್ ಖಂಡ್ರೆ — ಬೀದರ್,
ಡಾ. ಯತೀಂದ್ರ ಸಿದ್ದರಾಮಯ್ಯ — ಮೈಸೂರು‌. ಸುರೇಶ್ ಬಿ. ಎಸ್. — ಚಿಕ್ಕಬಳ್ಳಾಪುರ, ಡಾ. ಶರಣಪ್ರಕಾಶ್ ಪಾಟೀಲ್ — ಯಾದಗಿರಿ, ಡಾ. ಅಜಯ್ ಸಿಂಗ್ — ರಾಯಚೂರು, ಎಚ್. ಸಿ. ಬಾಲಕೃಷ್ಣ — ಬೆಂಗಳೂರು ದಕ್ಷಿಣ, ಬಸವರಾಜ ರಾಯರೆಡ್ಡಿ — ಗದಗ, ಎನ್. ಚೆಲುವರಾಯಸ್ವಾಮಿ — ಮಂಡ್ಯ, ಲಕ್ಷ್ಮಣ್ ಸವದಿ — ಉತ್ತರ ಕನ್ನಡ, ಮಧು ಬಂಗಾರಪ್ಪ – ಶಿವಮೊಗ್ಗ, ಎಸ್. ಎಸ್. ಮಲ್ಲಿಕಾರ್ಜುನ್-ದಾವಣಗೆರೆ, ಬಿ. ನಾಗೇಂದ್ರ — ಬಳ್ಳಾರಿ. ಪಿ. ಎಂ. ನರೇಂದ್ರಸ್ವಾಮಿ — ಕೊಡಗು, ಸಿ. ಪುಟ್ಟರಂಗಶೆಟ್ಟಿ — ಚಾಮರಾಜನಗರ, ರುದ್ರಪ್ಪ ಲಮಾಣಿ — ಹಾವೇರಿ, ಸಂತೋಷ್ ಲಾಡ್ — ಧಾರವಾಡ, ಕೆ. ಎನ್. ಶಿವಲಿಂಗೇಗೌಡ — ಹಾಸನ, ಶಿವರಾಜ್ ತಂಗಡಗಿ — ಕೊಪ್ಪಳ, ವಿಜಯಾನಂದ ಕಾಶಪ್ಪನವರ — ಬಾಗಲಕೋಟೆ, ಬಿ. ಝೆಡ್. ಜಝಮೀರ್ ಅಹ್ಮದ್ ಖಾನ್ — ವಿಜಯನಗರ, ಟಿ. ರಘುಮೂರ್ತಿ —ಚಿತ್ರದುರ್ಗ, ಬಸವಂತಪ್ಪ — ಉಡುಪಿ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಅನಾರೋಗ್ಯಕ್ಕೆ ಅಥವಾ ಇತರೇ ಕಾರಣಗಳಿಂದಾಗಿ ಸಚಿವರು ಧ್ವಜಾರೋಹಣ ಕಾರ್ಯಕ್ರಮಕ್ಕೆ ಅನುಪಸ್ಥಿತರಿದ್ದಲ್ಲಿ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡುವಂತೆ ಸೂಚಿಸಲಾಗಿದೆ.