ಬಂಟ್ವಾಳ : ಶಾಲಾ ಮಕ್ಕಳ ಬಸ್ ಅಡ್ಡಗಟ್ಡಿ ಬಸ್ ಚಾಲಕನಿಗೆ ತರಾಟೆ ತೆಗೆದುಕೊಂಡ ಘಟನೆ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಸಮೀಪ ನಡೆದಿದೆ.
ಶಾಲಾ ಬಸ್ ಸ್ಕೂಟರ್ ಒಂದಕ್ಕೆ ಡಿಕ್ಕಿ ಹೊಡೆಯಲು ಸಂಭವವಿತ್ತು ಎಂದು ಆರೋಪಿಸಿ ಗುಂಪೊಂದು ಶಾಲಾ ಬಸ್ ತಡೆದಿದೆ. ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದ ಶ್ರೀರಾಮ ವಿದ್ಯಾಕೇಂದ್ರಕ್ಕೆ ಸೇರಿದ ಬಸ್ ಇದಾಗಿದೆ.
ಬಸ್ ಒಳಗೆ ಶಾಲಾ ಮಕ್ಕಳಿದ್ದರೂ ಗುಂಪು ಗಲಾಟೆಗೆ ಮುಂದಾಗಿದೆ. ಬಸ್ ನ ಸಿಬ್ಬಂದಿಗೆ ಅವಾಜ್ ಹಾಕಿದ ಗುಂಪು ಶಾಲಾ ಬಸ್ ಬಿಟ್ಟು ಕಳುಹಿಸಿದೆ.



