ಉಡುಪಿ: ನ್ಯಾಯಾಲಯಕ್ಕೆ ಪದೇ ಪದೇ ನಿರಂತರ ಬಾರಿ ಹುಸಿ ಬಾಂಬ್ ಬೆದರಿಕೆಯ ಹಿನ್ನಲೆಯಲ್ಲಿ ಇಂದು ಉಡುಪಿ ವಕೀಲರ ಸಂಘದ ಪ್ರತಿನಿಧಿಗಳು ನ್ಯಾಯಾಧೀಶರ, ವಕೀಲರ, ನ್ಯಾಯಾಲಯ ಸಿಬ್ಬಂದಿ ಮತ್ತು ಕಕ್ಷಿಗಾರರುಗಳ ಹಿತದೃಷ್ಟಿಯಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಬೇಟಿ ನೀಡಿ ಪೊಲೀಸ್ ಉಪಾಧೀಕ್ಷಕರಿಗೆ ಆ ಬಗ್ಗೆ ಸೂಕ್ತ ರಕ್ಷಣೆ ಮತ್ತು ತನಿಖೆ ನಡೆಸಿ ನ್ಯಾಯಾಲಯಗಳಿಗೆ ಬಂದೋಬಸ್ತ್ ಒದಗಿಸುವಂತೆ ಮನವಿ ನೀಡಲಾಯಿತು.
ವಕೀಲರ ಬೇಡಿಕೆಗೆ ಸಕಾರತ್ಮಕವಾಗಿ ಸ್ಪಂದಿಸಿ ಶೀಘ್ರ ತನಿಖೆ ನಡೆಸಿಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ವಕೀಲರುಗಳಾದ ವೈ ಟಿ ರಾಘವೇಂದ್ರ, ಅಖಿಲ ಬಿ.ಹೆಗ್ಡೆ, ಗುರುರಾಜ್ ಜಿ.ಎಸ್. , ಅನಿಲ್ ಪೂಜಾರಿ, ಕವಿತಾ, ನಾಗರಾಜ್ ಕೆ, ಬಾನುಮತಿ ನಾಯರಿ ಉಪಸ್ಥಿತರಿದ್ದರು.




