Home Crime ಬೆಳ್ತಂಗಡಿ : ಬೈಕ್-ಕಾರು ನಡುವೆ ಅಪಘಾತ : ಯುವಕ ಮೃತ್ಯು….!!

ಬೆಳ್ತಂಗಡಿ : ಬೈಕ್-ಕಾರು ನಡುವೆ ಅಪಘಾತ : ಯುವಕ ಮೃತ್ಯು….!!

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ-ಧರ್ಮಸ್ಥಳ ರಸ್ತೆಯ ಕನ್ಯಾಡಿ ಸೇವಾಧಾಮದ ಬಳಿ ಬೈಕ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.

ಮೃತ ಬೈಕ್ ಸವಾರನನ್ನು ನಾವೂರು ಗ್ರಾಮದ ಹೊಡಿಕ್ಕಾರು ಚಂದ್ರಹಾಸ (28) ಎಂದು ತಿಳಿಯಲಾಗಿದೆ.

ಚಂದ್ರಹಾಸ ತನ್ನ ಬೈಕ್‌ನಲ್ಲಿ ಸತೀಶ್ ಎಂಬವರ ಜೊತೆ ಬೆಳಗ್ಗೆ ಧರ್ಮಸ್ಥಳ ಕಡೆ ಕೆಲಸಕ್ಕಾಗಿ ಹೋಗುತ್ತಿರುವ ಸಂದರ್ಭ ಸೇವಾಧಾಮದ ಬಳಿ ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ನಿಂದ ರಸ್ತೆಗೆ ಎಸೆಯಲ್ಪಟ್ಟ ಚಂದ್ರಹಾಸ್ ಗಂಭೀರ ಗಾಯಗೊಂಡಿದ್ದರು‌ ಎಂದು ತಿಳಿದು ಬಂದಿದೆ.

ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.