ವಿಟ್ಲ : ಸಾಲೆತ್ತೂರು ಗ್ರಾಮದ ಸಾರ್ವಜನಿಕ ಗುಡ್ಡ ಜಾಗ ದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟವನ್ನು ಆಡುತ್ತಿ ರುವ ವಿಚಾರ ತಿಳಿದ ವಿಟ್ಲ ಠಾಣಾ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರ ತಂಡ ದಾಳಿ ಮಾಡಿದ್ದಾರೆ.
ಬೋಳಿಯಾರ್ನಿವಾಸಿ ಲತೇಶ್ ಕುಮಾರ್ (37), ಮಂಚಿ ನಿವಾಸಿ ಸುರೇಶ್ ನಾಯ್ ಕೆ. (63), ವಿಟ್ಲ ಪಟ್ಟೂರು ನಿವಾಸಿ ದಯಾನಂದ (40) ಎಂಬವರನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ ರೂ 1,550 ನಗದು, 3 ಅಂಕದ ಕೋಳಿಗಳು ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




