Home Kundapura News ಹೆಮ್ಮಾಡಿ ಹೊಸಕಳಿ ಜಾಲಾಡಿ ದೈವಸ್ಥಾನದಲ್ಲಿ 17ನೇ ವರ್ಷದ ವರ್ಧಂತ್ಯೋತ್ಸವ ಸಂಪನ್ನ

ಹೆಮ್ಮಾಡಿ ಹೊಸಕಳಿ ಜಾಲಾಡಿ ದೈವಸ್ಥಾನದಲ್ಲಿ 17ನೇ ವರ್ಷದ ವರ್ಧಂತ್ಯೋತ್ಸವ ಸಂಪನ್ನ

ಹೆಮ್ಮಾಡಿ :ಹೊಸಕಳಿ ಜಾಲಾಡಿಯ ಶ್ರೀ ನಾಗ, ನಾಗಯಕ್ಷಿ ಜಟ್ಟಿಗೇಶ್ವರ ಹಾಗೂ ಸಪರಿವಾರ ದೈವಸ್ಥಾನದಲ್ಲಿ 17ನೇ ವರ್ಷದ ವರ್ಧಂತ್ಯೋತ್ಸವವು ಮೇ 17 ಮತ್ತು 18ರಂದು ಭಕ್ತಿಭಾವದಿಂದ ವಿವಿಧ ಧಾರ್ಮಿಕ ವಿಧಿ ವಿಧಾನ ಮೂಲಕ ಸಂಭ್ರಮದಿಂದ ಸಂಪನ್ನಗೊಂಡಿತು.

ಶ್ರೀ ವೆ. ಮೂ ಗಜೇಂದ್ರ ಹೊಳ್ಳ ಜಾಲಾಡಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಕೆ ಮಾತನಾಡಿ ಶ್ರೀ ವೆ. ಮೂ. ಗಜೇಂದ್ರ ಹೊಳ್ಳ, ಜಾಲಾಡಿ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಭಕ್ತಿ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಭಕ್ತರು ಒಗ್ಗಟ್ಟಿನಿಂದ ಕಾರ್ಯಕ್ರಮ ಯಶಸ್ವಿಗೊಳಿಸಿರುವುದು ಶ್ಲಾಘನೀಯ ಎಂದರು.

ಉದಯ್ ದೇವಾಡಿಗ. ಅಧ್ಯಕ್ಷರು ಶ್ರೀ ನಾಗ, ನಾಗಯಕ್ಷಿ, ಜಟ್ಟಿಗೇಶ್ವರ ಹಾಗೂ ಸಪರಿವಾರ ದೇವಸ್ಥಾನ ಜಾಲಾಡಿ, ಹೊಸಕಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ 17ನೇ ವರ್ಷದ ವರ್ಧಂತ್ಯೋತ್ಸವವನ್ನು ಭಕ್ತಿಭಾವದಿಂದ ಯಶಸ್ವಿಯಾಗಿ ನಡೆಸಲು ಭಕ್ತರು, ದಾನಿಗಳು ಹಾಗೂ ಗ್ರಾಮಸ್ಥರು ನೀಡಿದ ಸಹಕಾರ ಶ್ಲಾಘನೀಯವಾಗಿದೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಭಕ್ತಿ, ಐಕ್ಯತೆ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಮುಂದಿನ ದಿನಗಳಲ್ಲಿಯೂ ಎಲ್ಲರ ಸಹಕಾರ ಇದೇ ರೀತಿ ಇರಲಿ ಎಂದು ಕೋರಿದರು.

ಎಸ್ ಎಸ್ ಎಲ್ ಸಿ ಮತ್ತು PUCಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ದಾನಿಗಳಿಗೆ,ಹಾಗೂ ಸಮಾಜ ಸೇವಕ ಬೆಂಕಿಮಣಿ ಸಂತು ಮತ್ತು ಯೋಗ ಪಟು ತನ್ವಿತಾ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು

ಈ ಸಂದರ್ಭದಲ್ಲಿ ರಾಘವೇಂದ್ರ ದೇವಾಡಿಗ, ಕಂದಾಯ ನೀರಿಕ್ಷಕರು ವಂಡ್ಸೆ, ರಾಘವೇಂದ್ರ ಚರಣ್ ನಾವಡ, ವಕೀಲರು ಕುಂದಾಪುರ, ರಾಘವೇಂದ್ರ ಕುಲಾಲ್ ಮುಖ್ಯ ಕಾರ್ಯನಿರ್ವಾಹನಾಧಿಕಾರಿಗಳು ಪ್ರಗತಿ ಮಹಿಳಾ ಸಹಕಾರಿ ಸಂಘ ನಿ ಹೆಮ್ಮಾಡಿ, ರತನ್ ರಮೇಶ್ ಪೂಜಾರಿ,ರಮೇಶ್ ಪೂಜಾರಿ, ಉಪ ಪ್ರಾಂಶುಪಾಲರು ಜನತಾ pu ಕಾಲೇಜು ಹೆಮ್ಮಾಡಿ, ವಿಜಯ್ ಪೂಜಾರಿ ಉದ್ಯಮಿಗಳು ಹೋಟೆಲ್ ಶ್ರೀ ಕೃಷ್ಣ ವೈಭವ ಬೆಂಗಳೂರು, ಕಿರಣ್ ದೇವಾಡಿಗ ಉದ್ಯಮಿಗಳು ಶಾಂತಲಾ ಪೌಲ್ಟ್ರಿ ಫಾರಂ ಜಾಲಾಡಿ, ತೇಜ ದೇವಾಡಿಗ, ಸ್ಥಾಪಕಧ್ಯಕ್ಷರು jcc ಕ್ರಿಕೆಟ್ ಕ್ಲಬ್ ಜಾಲಾಡಿ, ಸಚ್ಚಿoದ್ರ ದೇವಾಡಿಗ, ಮಾಜಿ ಗ್ರಾಮಪಂಚಾಯಿತಿ ಸದಸ್ಯರು ಕಟ್ಬೇಲ್ತುರು ಗ್ರಾಮಸ್ಥರು ಉಪಸ್ಥಿತರಿದ್ದರು,ಕಿರಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು