ಕೊಲ್ಲೂರು: ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪ ವ್ಯಕ್ತಿಯೋರ್ವರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಮೃತಪಟ್ಟವರು ಭಾಸ್ಕರ ಎಂದು ತಿಳಿದು ಬಂದಿದೆ.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ರಂಜಿತ್ (40), ಜಡ್ಕಲ್ ಗ್ರಾಮ, ಬೈಂದೂರು ಇವರ ತಂದೆ ಭಾಸ್ಕರ (70) ರವರು ಒಂದು ವರ್ಷದ ಹಿಂದೆ ಹೃದಯ ಸಂಬಂಧಿ ಖಾಯಿಲೆ ಬಗ್ಗೆ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಈಗಲೂ ಮಾತ್ರೆಗಳನ್ನು ತೆಗೆದು ಕೊಳ್ಳುತ್ತಿರುವುದಾಗಿದೆ. ದಿನಾಂಕ 02/09/2025 ರಂದು ಹಾಲ್ಕಲ್ ಜಟ್ಟಿಗೇಶ್ವರ ದೇವಸ್ಥಾನದಲ್ಲಿ ಪಿರ್ಯಾದಿದಾರರ ಮನೆಯವರ ಸೋಣೆ ಆರತಿ ಪೂಜೆ ಬಗ್ಗೆ ಸಂಜೆ 05:30 ಗಂಟೆಗೆ ತೆರಳುವ ಸಮಯ ಪಿರ್ಯಾದಿದಾರರ ತಂದೆಯವರು ತಾನು ಬರುವುದಿಲ್ಲ ಮನೆಯಲ್ಲಿಯೇ ಇರುತ್ತೇನೆ ಎಂದು ತಿಳಿಸಿದಂತೆ ಪಿರ್ಯಾದಿದಾರರು ಹಾಗೂ ಮನೆಯ ಉಳಿದ ಸದಸ್ಯರು ಪೂಜೆಯ ಬಗ್ಗೆ ತೆರಳಿರುತ್ತಾರೆ. ಪೂಜೆ ಮುಗಿಸಿ ರಾತ್ರಿ 08:45 ಗಂಟೆಗೆ ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲು ಹಾಕಿದ್ದು ತಂದೆಯನ್ನು ಕರೆದಲ್ಲಿ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಮನೆಯ ಪಕ್ಕದಲ್ಲಿರುವ ಲೀಲಾವತಿ ಆಚಾರ್ ರವರ ಅಂಗಡಿ, ಗದ್ದೆ, ತೋಟದಲ್ಲಿ ಹುಡುಕಾಡಿದ್ದು ಸಿಕ್ಕಿರುವುದಿಲ್ಲ. ನಂತರ ಪಿರ್ಯಾದಿದಾರರ ತೋಟದ ಮೇಲ್ಭಾಗದಲ್ಲಿರುವ ಹಾಡಿಯಲ್ಲಿ ಹುಡುಕಾಡಿದಲ್ಲಿ ಹಾಡಿಯ ಒಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿರುತ್ತಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 20/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.