Home Kundapura News ಬೈಂದೂರು: ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಸಮೀಪ ಇರುವ ರೆಸ್ಟ್ ರೂಮ್ ಮತ್ತು ಟಾಯ್ಲೆಟ್ ಅವ್ಯವಸ್ಥೆ..!

ಬೈಂದೂರು: ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಸಮೀಪ ಇರುವ ರೆಸ್ಟ್ ರೂಮ್ ಮತ್ತು ಟಾಯ್ಲೆಟ್ ಅವ್ಯವಸ್ಥೆ..!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಮತ್ತು ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ 66ರ ರೆಸ್ಟ್ ರೂಮ್ ಮತ್ತು ಟಾಯ್ಲೆಟ್ ರೂಮಿನ ಕಟ್ಟಡವು ಅವ್ಯವಸ್ಥೆಯಿಂದ ಮಾರ್ಪಟ್ಟಿದೆ ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವರರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲಕ್ಕಿಂತ ಹೆಚ್ಚು ಅನಾನಕೂಲಕ್ಕೆ ಕಾರಣವಾಗಿದೆ

ಹೌದು ರಾಷ್ಟ್ರೀಯ ಹೆದ್ದಾರಿ 66 (NH 66) ರಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ, ಟಾಯ್ಲೆಟ್ ಮತ್ತು ರೆಸ್ಟ್ ರೂಮ್ (ವಿಶ್ರಾಂತಿ ಕೊಠಡಿ) ಸೌಲಭ್ಯಗಳ ಕೊರತೆ ಮತ್ತು ಅವ್ಯವಸ್ಥೆ ಒಂದು ದೊಡ್ಡ ಸಮಸ್ಯೆಯಾಗಿದೆ ಎಂದು ಬೈಂದೂರು ತಾಲೂಕು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಾಜೇಶ್ ಪೂಜಾರಿ ಆಕ್ರೋಶ ಹೊರ ಹಾಕಿದ್ದಾರೆ

ರೆಸ್ಟ್ ರೂಮ್ ನ ಟಾಯ್ಲೆಟ್ ನಲ್ಲಿ ನೀರಿನ ಪೈಪ್ ಲೈನ್ ಇದ್ದರು ನೀರಿನ ಸಂಪರ್ಕ ಇಲ್ಲ, ಲೈಟ್ ಇದ್ದರೂ ವಿದ್ಯುತ್ ಸಂಪರ್ಕ ಇಲ್ಲ, ನೀರಿನ ಟ್ಯಾಂಕ್ ಇದ್ದರೂ ನೀರಿನ ವ್ಯವಸ್ಥೆ ಇಲ್ಲ ವ್ಯವಸ್ಥೆಕ್ಕಿಂತ ಅವ್ಯವಸ್ಥೆ ಹೆಚ್ಚಾಗಿದೆ ತಕ್ಷಣ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಪ್ರಯಾಣಿಕರಿಗೆ ಹಾಗೂ ವಾಹನಸವರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಆಗ್ರಹಿಸಿದ್ದಾರೆ.