ಕುಂದಾಪುರ: ದನಗಳಿಗೆ ಹುಲ್ಲು ತರಲು ಹೋಗಿದ್ದಾಗ ಯುವತಿಯೋರ್ವಳು ಕಾಲು ಜಾರಿ ಕಿಂಡಿ ಅಣೆಕಟ್ಟಿನ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆಯ ಜಂಬೆಹಾಡಿ ಎಂಬಲ್ಲಿ ನಡೆದಿದೆ.
ಮೃತ ಯುವತಿಯನ್ನು ಮೂಕಾಂಬಿಕಾ (23) ಎಂದು ಗುರುತಿಸಲಾಗಿದೆ.
ಈಕೆ ದನಗಳಿಗೆ ಹುಲ್ಲು ತರಲು ಅತ್ತಿಗೆಯೊಂದಿಗೆ ತೋಟಕ್ಕೆ ಹೋಗಿದ್ದರು. ಹಿಂದಿರುಗಿ ಬರುವಾಗ ಅಶ್ವಿನಿ ಹಿಂದೆ ನೋಡಿದ್ರೆ ಮುಕಾಂಬಿಕಾ ಇರಲಿಲ್ಲ.
ಮತ್ತೆ ಆ ಕಡೆ ನೋಡಿದಾಗ ಹುಲ್ಲು ಕೊಯ್ಯುವ ಕತ್ತಿ ಪತ್ತೆಯಾಗಿದ್ದು ಅಣೆಕಟ್ಟಿನಲ್ಲಿ ಮೂಕಾಂಬಿಕಾಳ ಮೃತದೇಹ ಪತ್ತೆಯಾಗಿದೆ.