ಕಾರ್ಕಳ : ಭಾರತೀಯ ಸೇನೆಗೆ ಆಯ್ಕೆಯಾದ ಕೌಡೂರಿನ ಸುಧಾಕರ್ ಆಚಾರ್ಯ ಮತ್ತು ವೀಣಾ ಆಚಾರ್ಯ ಇವರ ಪುತ್ರರಾದ ಸಾಗರ್ ಆಚಾರ್ಯ ಇವರನ್ನು ಯುವ ಸಂಗಮ (ರಿ.) ಕೌಡೂರು ಇವರ ವತಿಯಿಂದ ಗೌರವಿಸಲಾಯಿತು.
ಸಂಘದ ಗೌರವ ಸಲಹೆಗಾರರು, ಅಧ್ಯಕ್ಷರು ಮತ್ತು ಪದಾಧಿಕಾರಿಯವರು ಹಾಗೂ ಸದಸ್ಯರು ಮನೆಗೆ ಭೇಟಿ ನೀಡಿ ಅಭಿನಂದಿಸಿ ಗೌರವಿಸಿದರು.










