ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಹಟ್ಟಿಯಲ್ಲಿದ್ದ 3 ದನಗಳನ್ನು ಯಾರೋ ಕಳ್ಳರು ಕಳ್ಳತನ ನಡೆಸಿದ ಘಟನೆ ಸಂಭವಿಸಿದೆ.
ಬಜಗೋಳಿ ನಿವಾಸಿ ಎ. ಕೆ ವಿರಂಜಯ್ ಅವರ ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ನಲ್ಲಿನ ಹಟ್ಟಿಯಲ್ಲಿ ದನಗಳ ಕಳ್ಳತನ ನಡೆದಿದೆ.
ಘಟನೆ ವಿವರ: ದಿನಾಂಕ 16/06/2025 ರಂದು ಬೆಳಗ್ಗಿನ ಜಾವ 4:00 ಗಂಟೆಯಿಂದ 04:15 ಗಂಟೆಯ ಮಧ್ಯೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿಯಲ್ಲಿ ಪಿರ್ಯಾದಿದಾರರಾದ ಎಂ ಕೆ ವಿರಂಜಯ್ (45) ಬಜಗೊಳಿ. ಮುಡಾರು ಗ್ರಾಮ ಇವರು ಸಂಚಾಲಕರಾಗಿ ನಡೆಸಿಕೊಂಡು ಬಂದಿರುವ ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ನಲ್ಲಿನ ಹಟ್ಟಿಯಲ್ಲಿರುವ 3 ದನಗಳನ್ನು ಯಾರೋ ಕಳ್ಳರು ವಾಹನದಲ್ಲಿ ಬಂದು ಕಳವು ಮಾಡಿ ವಾಹನದಲ್ಲಿ ತುಂಬಿಸಿಕೊಂಡು ಹೋಗಿದ್ದು ದನಗಳ ಅಂದಾಜು ಮೌಲ್ಯ ರೂಪಾಯಿ 10000 ಆಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 82/2025 ಕಲಂ: 329(3), 303(2) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.