ಶಂಕರನಾರಾಯಣ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟವನ್ನು ಆಡುತ್ತಿರುವಾಗ ಮಾಹಿತಿ ಮೇರೆಗೆ ಶಂಕರನಾರಾಯಣ ಪೊಲೀಸರು ದಾಳಿ ನಡೆಸಿ 10 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳು 1) ಸುಬ್ರಹ್ಮಣ್, 2) ಅಶ್ರಫ್ , 3) ಸುನೀಲ್ , 4) ಧೀರಜ್ , 5) ಶಂಕರ , 6) ಸುಧೀರ್ ಕುಮಾರ, 7) ಮಧುಕರ, 8) ಮನೋಹರ , 9) ಗಣೇಶ, 10) ರಾಮ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳ ಬಳಿ ಇದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ : ದಿನಾಂಕ 12/06/2025 ರಂದು ಆರೋಪಿತರಾದ 1) ಸುಬ್ರಹ್ಮಣ್, 2) ಅಶ್ರಫ್ , 3) ಸುನೀಲ್ , 4) ಧೀರಜ್ , 5) ಶಂಕರ , 6) ಸುಧೀರ್ ಕುಮಾರ, 7) ಮಧುಕರ, 8) ಮನೋಹರ , 9) ಗಣೇಶ, 10) ರಾಮ ಇವರು ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಮಂಜುನಾಥ ಕಾಂಪ್ಲೆಕ್ಸ್ ಕಟ್ಟಡದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಸಂಘಟಿತರಾಗಿ ಹಣವನ್ನು ಪಣವಾಗಿರಿಸಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಟ ಅಡುತ್ತಿದ್ದ ಸಮಯ ಶಂಭುಲಿಂಗಯ್ಯ ಎಮ್.ಇ, ಪೊಲೀಸ್ ಉಪನಿರೀಕ್ಷಕರು (ತನಿಖೆ), ಶಂಕರನಾರಾಯಣ ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಅಂದರ್ – ಬಾಹರ್ ಆಟಕ್ಕೆ ಬಳಸಿದ ನಗದು ಹಣ 8,810/- ರೂಪಾಯಿ, 10 ಮೊಬೈಲ್ ಪೋನ್ ಗಳು, ಇಸ್ಪೀಟ್ ಜೂಜಾಟ ಆಡಲು ಬಂದಿದ್ದ KA-20-EH-1107 HERO ಕಂಪನಿಯ ಮೋಟಾರು ಸೈಕಲ್, KA-19-EM-6793 HERO SPLENDER ಮೋಟಾರು ಸೈಕಲ್ , KA-20-EL-3575 YAMAHA ಕಂಪನಿಯ ಮೋಟಾರು ಸೈಕಲ್,ಇಸ್ಪೀಟ್ ಎಲೆಗಳು, ಲಾಸ್ಟೀಕ್ ಕುರ್ಚಿಗಳು, ಒಂದು ಪ್ಲಾಸ್ಟೀಕ್ ಟೇಬಲ್ , ಕಪ್ಪು ಮತ್ತು ಕೇಸರಿ ಬಣ್ಣ ಮಿಶ್ರಿತ -ಬಟ್ಟೆ ಹಾಗೂ ಒಂದು ಮೇಣದ ಬತ್ತಿಯನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 57/2025 ಕಲಂ: 112 ಬಿ ಎನ್ ಎಸ್ & ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.









