Home Karavali Karnataka ಆಟೋರಿಕ್ಷಾ ಮೇಲೆ ಕಾಡಾನೆ ದಾಳಿ : ಕೂದಲೆಳೆ ಅಂತರದಿಂದ ಪಾರಾದ ಚಾಲಕ…!!

ಆಟೋರಿಕ್ಷಾ ಮೇಲೆ ಕಾಡಾನೆ ದಾಳಿ : ಕೂದಲೆಳೆ ಅಂತರದಿಂದ ಪಾರಾದ ಚಾಲಕ…!!

ಮಂಗಳೂರು: ಆಟೋರಿಕ್ಷಾ ಮೇಲೆ ಕಾಡಾನೆ ದಾಳಿ ಮಾಡಿದ್ದು, ಕೂದಲೆಳೆ ಅಂತರದಿಂದ ಚಾಲಕ ಪಾರಾಗಿರುವ ಘಟನೆ ಇಂದು ಮುಂಜಾನೆ 5:30 ಗಂಟೆಗೆ ಧರ್ಮಸ್ಥಳ ಗ್ರಾಮದ ಬೊಳಿಯಾರು ಎಂಬಲ್ಲಿ ನಡೆದಿದೆ.

ಕಾಡಾನೆ ದಾಳಿಯಿಂದ ಆಟೋರಿಕ್ಷಾ ನಜ್ಜು ಗುಜ್ಜಾಗಿದೆ. ಆಟೋರಿಕ್ಷಾ ಚಾಲಕ ದಿನೇಶ್ ಮುಂಜಾನೆ ಮನೆಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ‌ ಸಂದರ್ಭ ಘಟನೆ ನಡೆದಿದ್ದು, ಮನೆಯ ಸಮೀಪವೇ ರಸ್ತೆ ಮದ್ಯೆ ಕಾಡಾನೆ ಹಿಂಡು ಎದುರಾಗಿದೆ.

ಆನೆ ಹಿಂಡು ಕಂಡು ಆತಂಕಗೊಂಡು ರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಚಾಲಕ ದಿನೇಶ್ ತಪ್ಪಿಸಿಕೊಂಡಿದ್ದಾರೆ. ರಸ್ತೆ ಮಧ್ಯೆ ರಿಕ್ಷಾ ಕಂಡು ಕಾಡಾನೆಗಳು ಆತಂಕಗೊಂಡಿದೆ.

ಗುಂಪಿನಲ್ಲಿದ್ದ ಕಾಡಾನೆಯೊಂದು ರಿಕ್ಷಾದ ಮೇಲೆ ಎರಗಿ ದಾಳಿ ಮಾಡಿದೆ.ದಾಳಿಯಲ್ಲಿ ರಿಕ್ಷಾ ನಜ್ಜುಗುಜ್ಜುಗೊಂಡಿದೆ. ರಿಕ್ಷಾವನ್ನು ಚರಂಡಿಗೆ ತಳ್ಳಿ ಆನೆ ಹಿಂಡು ಮುಂದೆ ಸಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದಾರೆ.