Home Crime ಯುವಕನೊಬ್ಬ ಬೋಟಿನಲ್ಲಿ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆ….!!

ಯುವಕನೊಬ್ಬ ಬೋಟಿನಲ್ಲಿ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆ….!!

ಗಂಗೊಳ್ಳಿ: ಉಡುಪಿ ಜಿಲ್ಲೆಯ ಗಂಗೊಳ್ಳಿ ಸಮೀಪ ಮೀನುಗಾರಿಕೆಯ ಬೋಟಿನಲ್ಲಿ ಕೆಲಸ ಮಾಡುತ್ತಿರುವಾಗ ಯುವಕನೊಬ್ಬ ಕಾಲು ಜಾರಿ ಸಮುದ್ರ ಬಿದ್ದು ನಾಪತ್ತೆಯಾದ ಘಟನೆ ನಡೆದಿದೆ.

ಸಮುದ್ರದ ನೀರಿಗೆ ಬಿದ್ದು ನಾಪತ್ತೆಯಾದ ಯುವಕ ಮಂಗಳೂರಿನ ನಿವಾಸಿ ರವಿಕುಮಾರ್ ಎಂದು ತಿಳಿದು ಬಂದಿದೆ.

ಈ ಘಟನೆ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಪ್ರಕರಣ ವಿವರ: ಪಿರ್ಯಾದಿದಾರರಾದ ಸಹಾಸ್‌ (25),ಮಂಗಳೂರು ಇವರು ಮಂಗಳೂರಿನ ಬಂದರಿನಲ್ಲಿ IND-KA-01-MM-4219 ಎಂಬ ನೊಂದಣಿ ಸಂಖ್ಯೆಯ ವಿಶ್ವನಾಗ್ ಎಂಬ ಹೆಸರಿನ ಬೋಟ್ ಅನ್ನು ಹೊಂದಿದ್ದು ಬೋಟ್‌ ನಲ್ಲಿ ಸುಮಾರು 10 ಜನ ಕೆಲಸ ಮಾಡಿಕೊಂಡಿದ್ದು ದಿನಾಂಕ 20/05/2025 ರಂದು ಮಧ್ಯಾಹ್ನ ಸುಮಾರು 12:00 ಗಂಟೆಗೆ ಮಂಗಳೂರಿನ ಬಂದರಿನಿಂದ ಮೀನುಗಾರಿಕೆ ಬಗ್ಗೆ ಹೊರಟಿದ್ದು, ದಿನಾಂಕ 25/05/2025 ರಂದು 11:45 ಗಂಟೆಗೆ ಬೋಟಿನ ಚಾಲಕ ತಿರುಪತಿ ಕರೆ ಮಾಡಿ ಸಮುದ್ರದಲ್ಲಿ ವಿಪರೀತ ಗಾಳಿ ಎದ್ದು ಬೋಟಿನಲ್ಲಿ ಸಮಸ್ಯೆ ಉಂಟಾಗಿ ಗಂಗೊಳ್ಳಿ ಬಂದರು ಕಡೆಗೆ ಬರುತ್ತಿರುವಾಗ ಬೋಟಿನ ಇಂಜಿನ್‌ ಸಮಸ್ಯೆಯಾಗಿ ಬೋಟನ್ನು ಸರಿಪಡಿಸಿಕೊಂಡು ವಾಪಾಸು ಗಂಗೊಳ್ಳಿ ಬಂದರಿಗೆ ಬರುತ್ತಿರುವಾಗ 10:30 ಗಂಟೆಗೆ ಬೋಟಿನಲ್ಲಿ ಕೆಲಸ ಮಾಡುತ್ತಿರುವ ವಯಾಲ್‌ ರವಿ ಕುಮಾರ್ (21) ಎಂಬುವವರು ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿರುತ್ತಾನೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2025 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.