ಉಡುಪಿ: ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ರಂಗಭೂಮಿ ಉಡುಪಿಯ 61ನೇ ವರ್ಷದ ಮಹಾಸಭೆ ಉಡುಪಿಯ ಹೋಟೆಲ್ ಡಯಾನದಲ್ಲಿ ಜರುಗಿತು.
ಮಹಾಸಭೆಯಲ್ಲಿ 2026-27ನೇ ಸಾಲಿನ ಆಡಳಿತ ಮಂಡಳಿಗೆ ಆಯ್ಕೆ ಯಾದ 19 ಸದಸ್ಯರ ಸಭೆ ನಡೆದು, ಸಂಸ್ಥೆಯ 62ನೇ ವರ್ಷಕ್ಕೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ. ಮಾರ್ಗ ದರ್ಶಕರಾಗಿ ಡಾ. ಎಚ್. ಶಾಂತಾರಾಮ್, ಗೌರವಾಧ್ಯಕ್ಷರಾಗಿ ಡಾ. ಎಚ್.ಎಸ್. ಬಲ್ಲಾಳ್, ಉಪಾಧ್ಯಕ್ಷರಾಗಿ ಭಾಸ್ಕರ ರಾವ್ ಕಿದಿಯೂರು, ಎನ್. ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಯಾಗಿ ಪ್ರದೀಪ್ ಚಂದ್ರ ಕುತ್ಪಾಡಿ, ಕೋಶಾಧಿಕಾರಿಯಾಗಿ ಭೋಜ ಯು., ಜತೆ ಕೋಶಾಧಿಕಾರಿಯಾಗಿ ಕೆ. ರವೀಂದ್ರ ಆಚಾರ್ಯ, ಜತೆ ಕಾರ್ಯದರ್ಶಿಗಳಾಗಿ ಶ್ರೀಪಾದ ಹೆಗಡೆ, ವಿವೇಕಾನಂದ ಎನ್., ಸಂಘಟನಾ ಕಾರ್ಯದರ್ಶಿಗಳಾಗಿ ಪೂರ್ಣಿಮಾ ಸುರೇಶ್, ಗಿರೀಶ್ ತಂತ್ರಿ, ರವಿರಾಜ ನಾಯಕ್ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ಸದಸ್ಯರಾಗಿ ವಿದ್ಯಾವಂತ ಆಚಾರ್ಯ, ಎಚ್. ಜಯಪ್ರಕಾಶ್ ಕೆದ್ಲಾಯ, ಡಾ. ವಿಷ್ಣುಮೂರ್ತಿ ಪ್ರಭು, ಅಮಿತಾಂಜಲಿ ಕಿರಣ್, ಆನಂದ ಮೇಲಂಟ, ಹರೀಶ್ ಜಿ. ಕಲ್ಮಾಡಿ, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಕಾರ್ತಿಕ್ ಪ್ರಭು.
ಗೌರವ ಸಲಹಾ ಸಮಿತಿಗೆ ಪಿ.ಯು. ದಾಮೋದರ್, ಕೆ. ಲಕ್ಷ್ಮೀ ನಾರಾಯಣ್ ಭಟ್, ಭುವನ ಪ್ರಸಾದ್ ಹೆಗ್ಡೆ, ಯು. ವಿಶ್ವನಾಥ ಶೆಣೈ, ವಿಠಲ ಗಾಣಿಗ, ಬೆಳಗೋಡು ರಮೇಶ್ ಭಟ್, ಸುಧಾಕರ ಪಂಡಿತ್.
ವಿಶೇಷ ಆಹ್ವಾನಿತ ಸದಸ್ಯರಾಗಿ ಡಾ. ಮಾಧವಿ ಎಸ್. ಭಂಡಾರಿ, ರಂಜನ್ ಕಲ್ಕೂರ, ರವೀಂದ್ರ ಕೆ. ಶೆಟ್ಟಿ ಸುಭಾಷ್ ಕೊರಂಗ್ರಪಾಡಿ, ಸುಬ್ರಹ್ಮಣ್ಯ ಶೇರೆಗಾರ್, ತುಮರಿ ಪ್ರಭಾಕರ ಜಿ. ಪಿ., ಸೂರ್ಯ ಪ್ರಕಾಶ್, ಶ್ರೀನಿವಾಸ ಆಚಾರ್ಯ, ರೇವತಿ ನಾಡಗೀರ್, ಜಯಕರ ಮಣಿಪಾಲ, ಎಚ್. ನರಸಿಂಹಮೂರ್ತಿ, ಡಾ.ಪಿ.ಬಿ. ಪ್ರಸನ್ನ, ಡಾ. ಸುಕನ್ಯಾ ಮೇರಿ ಜೆ., ಆದ್ಯತಾ ಭಟ್, ಸಂದೀಪ್ ಕುಮಾರ್ ಎಂ., ಅಶೋಕ್ ಕೋಟ್ಯಾನ್, ರಾಘವ ಬಿ., ಪ್ರೀತಮ್ ನಾಯಕ್, ಅಕ್ಷಯ್ ಭಟ್, ವೀಣಾ ಅಭಿಷೇಕ್ ಅವರನ್ನು ಆಯ್ಕೆ ಮಾಡಲಾಯಿತು.




