Home Crime ಮಂಗಳೂರು: ಮಾದಕ‌ ವಸ್ತು ಸೇವನೆ : ಮೂವರ ಬಂಧನ…!!

ಮಂಗಳೂರು: ಮಾದಕ‌ ವಸ್ತು ಸೇವನೆ : ಮೂವರ ಬಂಧನ…!!

ಮಂಗಳೂರು: ಮಾದಕ ವಸ್ತುವನ್ನು ಸೇವನೆ ಮಾಡಿದ ಆರೋಪದಡಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದಾರೆ.

ಮೊದಲ ಪ್ರಕರಣದಲ್ಲಿ ಪಣಂಬೂರಿನ ಕುದುರೆಮುಖ ಜಂಕ್ಷನ್ ಬಳಿ ಕೋಟೆಕಾರು ಸಮೀಪದ ಮಡ್ಯಾರು ನಿವಾಸಿ ಶ್ರೀಜಿತ್ ಶೆಟ್ಟಿ(24) ಎಂಬಾತನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಎರಡನೇ ಪ್ರಕರಣದಲ್ಲಿ ನಗರದ ರಾವ್ ಆ್ಯಂಡ್ ರಾವ್ ವೃತ್ತದ ಬಳಿಯ ಕಟ್ಟಡವೊಂದರ ಬಳಿ ಮಾದಕ ವಸ್ತು ಸೇವೆನೆ ಮಾಡಿದ್ದ ಕೇರಳದ ಕಣ್ಣೂರಿನ ಅಭಿಜಿತ್ ಅಜಯ್ (20) ಮತ್ತು ಎರ್ನಾಕುಲಂನ ಬೆನ್ ಎಲಿಯಾಸ್ (21) ಎಂಬವರನ್ನು ಪಾಂಡೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೂವರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.

ಈ ಕುರಿತು ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.