Home Latest ಕರ್ನಾಟಕ ರಾಜ್ಯ ವಿಪ್ರ ಫೋಟೋ ಮತ್ತು ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ಇದರ ಸಾರಥ್ಯ ರಮೇಶ್ ಬಿ.ಕೆ. ಬಗಲಿಗೆ…!!

ಕರ್ನಾಟಕ ರಾಜ್ಯ ವಿಪ್ರ ಫೋಟೋ ಮತ್ತು ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ಇದರ ಸಾರಥ್ಯ ರಮೇಶ್ ಬಿ.ಕೆ. ಬಗಲಿಗೆ…!!

ಉಡುಪಿ : ವಾರ್ಷಿಕ ಸರ್ವ ಸದಸ್ಯರ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಎಕೆಬಿಎಂಎಸ್ ನಲ್ಲಿ ನೆಡೆಯಿತು. 2026-27ನೇ ಸಾಲಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಚುನಾವಣೆ ಮತದಾನದ ಮೂಲಕ ಬಾಬು ಜಿ ಎಸ್ ಚುನಾವಣಾ ಅಧಿಕಾರಿ ಸಮ್ಮುಖದಲ್ಲಿಜರಗಿತು

ಅಧ್ಯಕ್ಷ ಸ್ಥಾನಕ್ಕೆ ರಮೇಶ್ ​ಬಿ.ಕೆ. ಅವರು ಚುನಾವಣೆಯಲ್ಲಿ ಆಯ್ಕೆಯಾದರು, ಉಪಾಧ್ಯಕ್ಷ ​ರಾಗಿ ಎಸ್ ರಘು​, ಕಾರ್ಯದರ್ಶಿಯಾಗಿ​ ಪ್ರದೀಪ್ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು​. ಸಹ ಕಾರ್ಯದರ್ಶಿಯಾಗಿ ಸುಧೀರ್ ಹೆಬ್ಬಾರ್​, ಖಜಾಂಚಿಯಾಗಿ ಪ್ರಸನ್ನ ಕುಲಕರ್ಣಿ ​ಆಯ್ಕೆಯಾದರು.

ನಿರ್ದೇಶಕರು​ಗಳಾಗಿ ಆರ್. ಜಿ.ಭಟ್​, ಪ್ರಸನ್ನ ಎನ್ ಎಸ್.​, ಕಾಶಿ ಸುಬ್ರಮಣ್ಯ​, ಚಂದ್ರಶೇಖರ ಎಸ್ ಆರ್​, ಜೂಪಿಟರ್ ಮಂಜುನಾಥ್​, ರಮೇಶ್ ಭಟ್​, ​ಸತ್ಯಪ್ರಕಾಶ್​, ರಾಘವೇಂದ್ರ ರಾವ್​, ಶ್ರೀನಿವಾಸ್ ವೈಕೆ​, ಆರ್ ಕೃಷ್ಣ​, ಲಕ್ಷ್ಮಿಕಾಂತ್ ಆರ್​ ​ಆಯ್ಕೆಯಾದರು

ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ವಿಪ್ರ ಛಾಯಾಗ್ರಹಾಕರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್ ರಘುನಾಥ್ ಅವರು ವಿತರಿಸಿ​, ಪ್ರತಿಭಾವಂತ ಮಕ್ಕಳಿಗೆ ತಂದೆ ತಾಯಿಗಳಿಗೆ ಗುರುಗಳಿಗೆ ಶುಭಾಶಯ ಕೋರಿದರು.

ಅಧ್ಯಕ್ಷರು ಮಾತನಾಡುತ್ತಾ ಛಾಯಾಗ್ರಹಕರ ಸಂಘಟನೆ ಮಹಾಸಭಾದೊಂದಿಗೆ ನಿಕಟ ಸಂಬಂಧ ಹೊಂದಿದ್ದು ನಮಗೆ ಹಿಂದಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದಾರೆ​. ಮಹಾಸಭಾ ​ವತಿಯಿಂದ ತಮಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು​.

ಅಧ್ಯಕ್ಷ ರಮೇಶ್ ಬಿ.ಕೆ. ಅವರು ಮಾತನಾಡುತ್ತಾ ರಾಜ್ಯಾದ್ಯಂತ ಇರುವ ಎಲ್ಲಾ ವಿಪ್ರ ಛಾಯಾಗ್ರಹಕರುಗಳು ಹಾಗೂ ವೀಡಿಯೋಗ್ರಾಫರ್ಸ್ಗಳು ಸದಸ್ಯರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.