Home Kundapura News ಬೈಂದೂರಿನಲ್ಲಿ ಮಟ್ಕಾ ಜುಗಾರಿ ಮೇಲೆ ದಾಳಿ

ಬೈಂದೂರಿನಲ್ಲಿ ಮಟ್ಕಾ ಜುಗಾರಿ ಮೇಲೆ ದಾಳಿ

ಸಾಂದರ್ಭಿಕ ಚಿತ್ರ

ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ಅನ್ನಪೂರ್ಣ ಹೋಟೆಲ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಯುತ್ತಿದ್ದ ಮಾಹಿತಿ ಮೇರೆಗೆ ಪಿಎಸ್‌ಐ ಸುನೀಲ ಕುಮಾರ್ ಬಿ.ವೈ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

 

ಈ ವೇಳೆ ಆರೋಪಿತ ಮಂಜುನಾಥ ಗಾಣಿಗನನ್ನು ವಶಕ್ಕೆ ಪಡೆದು, ರೂ.550 ನಗದು, ಮಟ್ಕಾ ಚೀಟಿ ಹಾಗೂ ಬಾಲ್ ಪೆನ್ ವಶಪಡಿಸಿಕೊಳ್ಳಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.