Home Latest ಉಡುಪಿಯ ಗರಡಿಮಜಲುವಿನಲ್ಲಿ ನಿಲ್ಲಿಸಿದ್ದ ಬಸ್ ನೊಳಗೆ ನುಗ್ಗಿದ ಚಿರತೆ : ಸ್ಥಳೀಯರಲ್ಲಿ ಆತಂಕ…!!

ಉಡುಪಿಯ ಗರಡಿಮಜಲುವಿನಲ್ಲಿ ನಿಲ್ಲಿಸಿದ್ದ ಬಸ್ ನೊಳಗೆ ನುಗ್ಗಿದ ಚಿರತೆ : ಸ್ಥಳೀಯರಲ್ಲಿ ಆತಂಕ…!!

ಉಡುಪಿ: ಉಡುಪಿಯ ನಗರ ಭಾಗದಲ್ಲೂ ಚಿರತೆಗಳ ಕಾಟ ಇದೆ. ಇಲ್ಲಿನ ಗರಡಿ ಮಜಲು ಪರಿಸರದಲ್ಲಿ ನಿಲ್ಲಿಸಿದ್ದ ಬಸ್ ಗೆ ರಾತ್ರಿ ವೇಳೆ ಚಿರತೆ ನುಗ್ಗಿದೆ ಎಂದು ಜನರು ಸಂಶಯ ವ್ಯಕ್ತಪಡಿಸಿದ್ದಾರೆ.

ರಾತ್ರಿ ಟ್ರಿಪ್ ಗಳನ್ನು ಮುಗಿಸಿದ ನಂತರ. ಖಾಸಗಿ ಬಸ್ಸನ್ನು ಗರಡಿಮಜಲಿನಲ್ಲಿ ಪಾರ್ಕಿಂಗ್ ಮಾಡಲಾಗಿತ್ತು. ಬೆಳಿಗ್ಗೆ ಬಂದು ನೋಡಿದಾಗ ಸೀಟುಗಳನ್ನು ಹರಿದು ಹಾಕಲಾಗಿತ್ತು. ಯಾರೋ ಕಿಡಿಗೇಡಿಗಳು ಈ ಕೃತ್ಯ ಮಾಡಿರಬಹುದು ಎಂದು ಊಹಿಸಲಾಗಿತ್ತು. ಆದರೆ ಈ ಪರಿಸರದಲ್ಲಿ ಚಿರತೆಯ ಕಾಟ ಹೆಚ್ಚಿರುವುದರಿಂದ, ಬಸ್ಸಿನೊಳಗೆ ಚಿರತೆ ಬಂದಿರಬಹುದು ಎಂಬ ಸಂಶಯ ದಟ್ಟವಾಗಿದೆ.

ಡ್ರೈವರ್ ಸೀಟು ಹರಿದು ಹೋಗಿದೆ, ಬಾನೆಟ್ ಮೇಲೆ ಇದ್ದ ಕುಶನ್ ಹರಿದು ಹಾಕಲಾಗಿದೆ. ದೊಡ್ಡ ಗಾತ್ರದ ಬೆರಳಚ್ಚು ಕೂಡ ಇದೆ. ಈ ಭಾಗದಲ್ಲಿ ಚಿರತೆಯ ಕಾಟ ಜೋರಾಗಿದ್ದು ಬೋನು ಇರಿಸಲಾಗಿದೆ. ಚಿರತೆ ಬೋನ್ ಗೆ ಸೆರೆ ಸಿಕ್ಕುವವರೆಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.