Home Kundapura News ಕುಂದಾಪುರ: ಪುರಸಭೆಯ ಮದ್ದುಗುಡ್ಡೆ ರಾಜಕಾಲುವೆ ಸ್ವಚ್ಛತಾ ಕಾರ್ಯ…!!

ಕುಂದಾಪುರ: ಪುರಸಭೆಯ ಮದ್ದುಗುಡ್ಡೆ ರಾಜಕಾಲುವೆ ಸ್ವಚ್ಛತಾ ಕಾರ್ಯ…!!

ಕುಂದಾಪುರ: ಪುರಸಭೆ ವ್ಯಾಪ್ತಿಯ ಹೃದಯ ಭಾಗದ ಮದ್ದುಗುಡ್ಡೆ ರಾಜ ಕಾಲುವೆ ಕಸ ಕಡ್ಡಿಗಳಿಂದ ಮಾರ್ಪಟ್ಟಿದ್ದು ಮಳೆಗಾಲ ಸಮೀಪದಲ್ಲಿದ್ದ ಕಾರಣ ಹಾಗೂ ಸ್ವಚ್ಛತೆಯ ನಿಟ್ಟಿನಲ್ಲಿ ಪುರಸಭೆಯ ಪೌರ ಕಾರ್ಮಿಕರು ಶ್ರಮದಾನದ ಮೂಲಕ ರಾಜ ಕಾಲುವೆಗಳಲ್ಲಿ ತುಂಬಿಕೊಂಡಿದ್ದ ಕಸ ಕಡ್ಡಿಗಳನ್ನು ಮತ್ತು ಕಾಲುವೆಯಲ್ಲಿ ತುಂಬಿದ ಕೆಸರು ಮೇಲಕ್ಕೆ ಎತ್ತಿ ತೆಗೆದು ಕಾಲುವೆಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯ ಮಾಡಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಾತ್ರರಾದರು

ಪುರಸಭೆಯ ಆಹಾರ ನಿರೀಕ್ಷಕ ರಾಘವೇಂದ್ರ ನಾಯ್ಕ್ ಸೇರಿದಂತೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಾಗೂ ಪೌರಕಾರ್ಮಿಕರ ವಿಶೇಷ ಶ್ರಮದಾನದ ಮೂಲಕ ಮದ್ದುಗುಡ್ಡೆ ರಾಜ ಕಾಲುವೆ ಸ್ವಚ್ಛತೆ ಕಾರ್ಯ ನಡೆದಿದೆ

ಕುಂದಾಪುರ ಪುರಸಭೆ ಭಾಗದ ಮದ್ದುಗುಡ್ಡೆ ಸೇರಿದಂತೆ ವಿವಿಧ ಭಾಗದ ರಾಜ ಕಾಲುವೆಯಲ್ಲಿ ತುಂಬಿಕೊಂಡಿದ್ದ , ತ್ಯಾಜ್ಯ ವಸ್ತುಗಳು ಗಿಡಗಳನ್ನು ತೆರವುಗೊಳಿಸಲಾಯಿತು. ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಯಿತು.

ಒಟ್ಟಾರೆಯಾಗಿ ಅಧಿಕಾರಿಗಳ ಪ್ರಾಮಾಣಿಕ ಕರ್ತವ್ಯ ನಿಷ್ಠೆಗೆ ಪ್ರಜ್ಞಾವಂತ ನಾಗರಿಕರು ಹಾಗೂ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ