ಶಿರ್ವ: ಉಡುಪಿ ಜಿಲ್ಲೆಯ ಕಾಪು ಸಮೀಪದ ಶಿರ್ವ ಎಂಬಲ್ಲಿ ಯುವಕನೊಬ್ಬ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ರಂಜನ್ ಎಂದು ತಿಳಿಯಲಾಗಿದೆ.
ರಂಜನ್ ಕೆಲವು ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ: ಪಿರ್ಯಾದಿ ಶ್ರೀಮತಿ ಮಂಜುಳಾ ಸತೀಶ್ ಶೆಟ್ಟಿ(43) ಬೆಳಪು ಗ್ರಾಮ, ಕಾಪು ತಾಲೂಕು ಇವರ ತಾಯಿಯ ಅಣ್ಣನ ಮಗ ರಂಜನ್ (35) ಇವರು ಪಿರ್ಯಾದಿದಾರರ ಮನೆ ಬಳಿ ಒಬ್ಬರೇ ಅವರ ಮನೆಯಲ್ಲಿ ವಾಸ್ತವ್ಯ ಇದ್ದು ಇವರ ತಂದೆ, ತಾಯಿ ಮೃತರಾಗಿರುತ್ತಾರೆ.ಇವರು ಅವಿವಾಹಿತರಾಗಿರುತ್ತಾರೆ.ಇವರ ಇಬ್ಬರು ಅಕ್ಕಂದಿರು ಮುಂಬಾಯಿಯಲ್ಲಿ ವಾಸ್ತವ್ಯ ಇದ್ದಾರೆ. ರಂಜನ್ ಇವರು ಕಳೆದ ಐದು ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದರು. ಇವರು ದಿನಂಪ್ರತೀ ಪಿರ್ಯಾದಿದಾರರ ಮನೆಯಲ್ಲಿ ಊಟ ತಿಂಡಿ ಮಾಡುತ್ತಿದ್ದು ಎಂದಿನಂತೆ 05.07.025 ರಂದು ರಾತ್ರಿ 09:15 ಗಂಟೆಗೆ ಪಿರ್ಯಾದಿದಾರರ ಮನೆಯಲ್ಲಿ ಊಟ ಮುಗಿಸಿ ಅವರ ಮನೆಗೆ ಹೋಗಿರುತ್ತಾರೆ.ದಿನಾಂಕ: 06.07.2025 ರಂದು ಬೆಳಿಗ್ಗೆ 08:00 ಗಂಟೆಯಾದರೂ ರಂಜನ್ ಮನೆ ಕಡೆಗೆ ಬಾರದೇ ಇದ್ದುದ್ದನ್ನು ಗಮನಿಸಿ ಪಿರ್ಯಾದಿದಾರರು ರಂಜನ್ ಇವರನ್ನು ಕರೆಯಲು ಅವರ ಮನೆಗೆ ಹೋದಾಗ ಮನೆಯ ಮುಖ್ಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿದ್ದು ಕಿಟಕಿಯ ಮುಖಾಂತರ ಒಳ ನೋಡಿದಾಗ ರಂಜನ್ ಮನೆಯ ಚಾವಡಿಯಲ್ಲಿ ಮಾಡಿನ ಮರದ ಪಕ್ಕಾಸಿಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.