ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕಾರಿನ ಚಾಲಕ ಓವರ್ ಟೇಕ್ ಮಾಡುವ ಬರದಲ್ಲಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಸವಾರೆ ಮೃತಪಟ್ಟ ಘಟನೆ ನಡೆದಿದೆ.
ಸಾವನ್ನಪ್ಪಿದ ಮಹಿಳೆ ಯಶವಂತಿ ಎಂದು ತಿಳಿದು ಬಂದಿದೆ.ಕಾರು ಚಾಲಕ ಗಣೇಶ್ ಎಂದು ಗುರುತಿಸಲಾಗಿದೆ.
ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣದ ವಿವರ: ದಿನಾಂಕ 04/06/2025 ರಂದು ಸಂಜೆ 5:45 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಎನ್.ಎಸ್. ಕಾಂಪ್ಲೆಕ್ಸ್ ಎದುರುಗಡೆ ಹಾದು ಹೋಗಿರುವ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಯಶವಂತಿ ಎಂಬುವವರು ತನ್ನ KA-20-EU-0533 ನೇ ನಂಬರಿನ ಸ್ಕೂಟರನ್ನು ಹೆಲ್ಮೆಟ್ ಧರಿಸಿ ಕಾರ್ಕಳದಿಂದ ನಿಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಬಂದು ನಿಟ್ಟೆ ಗ್ರಾಮದ ಎನ್ ಎಸ್ ಕಾಂಪ್ಲೆಕ್ಸ್ ಬಳಿ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ರಸ್ತೆಗೆ ಇಂಡಿಕೇಟರ್ ಹಾಕಿ ತಿರುಗಿಸಿ ಮುಂದೆ ಸಾಗುತ್ತಿದ್ದಾಗ ದ್ವಿಚಕ್ರ ವಾಹನದ ಹಿಂದುಗಡೆಯಿಂದ ಕಾರ್ಕಳ-ಪಡುಬಿದ್ರೆ ಕಡೆಗೆ KA-19-MB-0458 ನೇ ಸ್ಯಾಂಟ್ರೋ ಕಾರಿನ ಚಾಲಕ ಗಣೇಶ್ ಓವರ್ಟೇಕ್ ಮಾಡುವ ಬರದಲ್ಲಿ ದ್ವಿಚಕ್ರ ವಾಹನದ ಬಲ ಬದಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರರಾದ ಯಶವಂತಿ (47)ಯವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಪಘಾತದಿಂದ ಎರಡೂ ವಾಹನಗಳು ಜಖಂ ಗೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 73/2025 ಕಲಂ: 281, 106 BNS ರಂತೆ ಪ್ರಕರಣ ದಾಖಲಾಗಿರುತ್ತದೆ.