ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ದೇವಸ್ಥಾನ ಒಂದರ ಕಾಣಿಕೆ ಡಬ್ಬಿಯ ಹಣ ಕಳ್ಳತನ ನಡೆಸಿದ ಕಳ್ಳನನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮೊಹಮ್ಮದ್ ಸಲ್ಮಾನ್ ಎಂದು ಗುರುತಿಸಲಾಗಿದೆ.
ಹೆಬ್ರಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣ ವಿವರ: ದಿನಾಂಕ 03/06/2025 ರಂದು ಬೆಳಗಿನ ಜಾವ 12.40 ಗಂಟೆಯ ಸುಮಾರಿಗೆ ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ದೇವಸ್ಥಾನದ ಕಡೆಯಿಂದ ಎನೋ ಶಬ್ದವಾಗಿ ವಾಗಿರುವುದನ್ನು ಗಮನಿಸಿದ ದೇವಸ್ಥಾನದ ಪಕ್ಕದ ಮನೆಯಲ್ಲಿ ವಾಸವಾಗಿರುವ ದೇವಳದ ಧರ್ಮದರ್ಶಿಯವರಾದ ಪಿರ್ಯಾದಿ ಸುಕುಮಾರ್ ರವರು ಹೊರಗೆ ಬಂದು ನೋಡಲಾಗಿ ಓರ್ವ ವ್ಯಕ್ತಿ ದೇವಸ್ಥಾನ ಕಡೆಯಿಂದ ಓಡಿ ಹೋಗುತ್ತಿದ್ದು, ಅವರು ದೇವಸ್ಥಾನಕ್ಕೆ ಬಂದು ನೋಡಲಾಗಿ, ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಒಡೆದು ಅದರಿಂದ ಸುಮಾರು 2 ರಿಂದ 5 ಸಾವಿರದ ವರೆಗಿನ ಹಣವನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 33/2025 US 305, 331(4) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.
ಪಿರ್ಯಾದುದಾರರ ಮಾಹಿತಿಯಂತೆ, ಆರೋಪಿಯ ಸುಳಿವು ಪಡೆದು ಚೆಕ್ ಪೋಸ್ಟ್ ಮೂಲಕ ನಾಕಬಂದಿ ನಡೆಸಿ, ಆರೋಪಿ ಮೊಹಮ್ಮದ್ ಸಲ್ಮಾನ್(24), ತಂದೆ: ಹಜರತ್ ಅಲಿ, ಹರಿಹರ, ದಾವಣಗೆರೆ ಎಂಬವನನ್ನು ದಸ್ತಗಿರಿ ಮಾಡಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.