ಮೂಡುಬಿದಿರೆ : ವಾಲ್ಪಾಡಿ ಗ್ರಾಮದ ಜೋಗೊಟ್ಟು ಪಡ್ಡಾಯಿಮಜಲು ಬಳಿಯ ಕಿಂಡಿ ಅಣೆಕಟ್ಟಿನ ಹಲಗೆಗಳನ್ನು ತೆಗೆಯುವಾಗ ಸ್ಲ್ಯಾಬ್ ಕುಸಿದು ನೀರಿಗೆ ಬಿದ್ದು ಕೊಚ್ಚಿ ಹೋದ ಗುರುಪ್ರಸಾದ್ ಭಟ್ (38) ಅವರ ಮೃತದೇಹ ಶಿರ್ತಾಡಿ ಸೇತುವೆ ಬಳಿ ರವಿವಾರ ಅಪರಾಹ್ನ ಪತ್ತೆಯಾಗಿದೆ.
ಅಗ್ನಿಶಾಮಕ ದಳದವರು, ಸ್ಥಳೀಯರು ಬೋಟ್ ಬಳಸಿ ಹುಡುಕಾಟ ನಡೆಸಿದ್ದು, ಫಲಕಾರಿಯಾಗದೆ ಮುಳುಗು ತಜ್ಞ ಈಶ್ವರ್ ಮಲ್ಪೆ ಸಂಗಡಿಗರು ಬೆಳಗ್ಗೆ ಕಾರ್ಯಾಚರಣೆ ನಡೆಸಿ ಪಡ್ಡಾಯಿ ಮಜಲುನಿಂದ ಸುಮಾರು 3 ಕಿ.ಮೀ. ದೂರದಲ್ಲಿ ಶಿರ್ತಾಡಿ ಕಜೆ ಬಳಿ ಮೃತ ದೇಹವನ್ನು ಮೇಲಕ್ಕೆತ್ತು ವಲ್ಲಿ ಸಫಲರಾದರು.
45 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಈ ಕಿಂಡಿ ಅಣೆಕಟ್ಟು ತೀರಾ ದುರ್ಬಲವಾಗಿದ್ದು ಕೆಲವೆಡೆ ಕಬ್ಬಿಣದ ಸರಳನ್ನು ಬಳಸದಿರುವುದೇ ಸ್ಲ್ಯಾಬ್ ಕುಸಿಯಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.