Home Karnataka News “ಕರಾವಳಿ” ಚಿತ್ರದ ಟ್ರೈಲರ್ ಲಾಂಚ್ನಲ್ಲಿ ಪ್ರಜ್ವಲ್ ಫ್ಯಾನ್ಸ್ ಗಲಾಟೆ…!!

“ಕರಾವಳಿ” ಚಿತ್ರದ ಟ್ರೈಲರ್ ಲಾಂಚ್ನಲ್ಲಿ ಪ್ರಜ್ವಲ್ ಫ್ಯಾನ್ಸ್ ಗಲಾಟೆ…!!

ಬೆಂಗಳೂರು: ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ನಟಿಸಿರೋ “ಕರಾವಳಿ” ಸಿನಿಮಾ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡ್ತಾ ಬಂದಿದೆ. ಚಿತ್ರದ ಟೀಸರ್ – ಸಾಂಗ್ಸ್ ನಿರೀಕ್ಷೆ ಮೂಡಿಸಿವೆ. ಆದ್ರೆ ಕರಾವಳಿ ಟ್ರೈಲರ್ ಲಾಂಚ್ನಲ್ಲಿ ಒಂದು ಕದನ ಸಂಭವಿಸಿದೆ ಮ

ಟ್ರೈಲರ್ ಬಿಡುಗಡೆಗೆ ಪ್ರಜ್ವಲ್ ಬಂದಿಲ್ಲ. ಇತ್ತ ಅವರ ಫ್ಯಾನ್ಸ್ ಈ ಇವೆಂಟ್ ಗೆ ಬಂದು ಚಿತ್ರತಂಡವರ ಮೇಲೆ ಎಗರಾಡಿದ್ದಾರೆ. ತಳ್ಳಾಟ-ನೂಕಾಟ ನಡೆದು ದೊಡ್ಡ ಹೈಡ್ರಾಮಾನೇ ನಡೆದುಹೋಗಿದೆ.

ಹೌದು ಈ ಸಿನಿಮಾಗೆ ಪ್ರಜ್ವಲ್ ನಾಯಕನಟ. ಆದ್ರೆ ಚಿತ್ರದ ಮುಖ್ಯವಾದ ಅತಿಥಿ ಪಾತ್ರಕ್ಕೆ ರಾಜ್ ಎಂಟ್ರಿ ಕೊಟ್ಟಿದ್ದಾರೆ. ಶೆಟ್ರು ಬಂದ ಮೇಲೆ ತನ್ನನ್ನ ಕಡೆಗಣಿಸಿದ್ರು ಅಂತ ಪ್ರಜ್ವಲ್ಗೆ ಅನ್ನಿಸ್ತಾ ಗೊತ್ತಿಲ್ಲ. ಎರಡು ತಿಂಗಳಿಂದ ನಿರ್ದೇಶಕ ಗುರುದತ್ ಗಾಣಿಗ ಫೋನ್ ಸಂಪರ್ಕಕ್ಕೆ ಸಿಕ್ತಿಲ್ಲವಂತೆ ಪ್ರಜ್ವಲ್ ಎಂದು ತಿಳಿಯಲಾಗಿದೆ.

ಹೌದು, ಪೇಮೆಂಟ್ ವಿಷ್ಯಕ್ಕೆ ಪ್ರಜ್ವಲ್ ಮುನಿಸಿಕೊಂಡಿದ್ದಾರಾ? ಆದ್ರೆ ಸಿಕ್ಕ ಮಾಹಿತಿ ಪ್ರಕಾರ ಕರಾವಳಿ ನಿರ್ಮಾಪಕರು ನಟ ಪ್ರಜ್ವಲ್‌ಗೆ ಬರೊಬ್ಬರಿ 1 ಕೋಟಿ ಪೇಮೆಂಟ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಆದ್ರೆ ಕೋಟಿ ಪೇಮೆಂಟ್ ಪಡೆದ ನಟ ಟ್ರೈಲರ್ ಲಾಂಚ್ಗೆ ಅಬ್ಸೆಂಟ್ ಆಗಿದ್ದಾರೆ ಏಕೆ? ಈ ವಿವಾದ ಅಸಲಿಯತ್ತೇನು?.ಕೆಲವರ ಪ್ರಕಾರ 25  ಲಕ್ಷ ರೂಪಾಯಿ ಪ್ರಜ್ವಲ್ ದೇವರಾಜ್‌ ಕೊಡಲು ಬಾಕಿ ಇತ್ತು ಎನ್ನಲಾಗಿದೆ.

ಹೌದು, ಟ್ರೈಲರ್ ಲಾಂಚ್ನಲ್ಲಿ ನಡೆದ ಗಲಾಟೆ, ಪ್ರಜ್ವಲ್ ಮುನಿಸಿನ ಪ್ರಸಂಗದಿಂದ ರಾಜ್ ಶೆಟ್ಟಿ ಸಿಕ್ಕಾಪಟ್ಟೆ ಅಪ್ಸೆಟ್ ಆಗಿದ್ದಾರೆ. ಇದಕ್ಕೇ ನಮ್ಮ ಚಿತ್ರರಂಗ ಉದ್ದಾರ ಆಗಿಲ್ಲ’ ಅಂತ ನೋವು ತೋಡಿಕೊಂಡಿದ್ದಾರೆ.

ಪ್ರಜ್ವಲ್ ದೇವರಾಜ್ ಇಷ್ಟು ವರ್ಷ ಚಿತ್ರರಂಗದಲ್ಲಿದ್ರೂ ಒಂದು ವಿವಾದ ಕೂಡ ಮಾಡಿಕೊಂಡವರಲ್ಲ. ಆದ್ರೆ ಕರಾವಳಿ ವಿಚಾರದಲ್ಲಿ ಇಂಥಾ ವಿವಾದ ಯಾಕಾಯ್ತು ಅನ್ನೋ ಪ್ರಶ್ನೆ ಚಿತ್ರಪ್ರಿಯರನ್ನ ಕಾಡ್ತಾ ಇದೆ.

ಒಟ್ಟಿನಲ್ಲಿ, ಅದ್ಧೂರಿಯಾಗಿ ಸಿದ್ದವಾಗಿರೋ ‘ಕರಾವಳಿ ಸಿನಿಮಾ ಬೇಡದ ಕಾರಣಕ್ಕೆ ಸುದ್ದಿಯಾಗಿದೆ. ತಮ್ಮದೇ ಚಿತ್ರವನ್ನ ಒಬ್ಬ ನಟ ಸಾಯಿಸೋದಕ್ಕೆ ಹೊರಟರಾ? ಅಥವಾ ಸತ್ಯ ಇನ್ನೇನೋ ಇದೆಯಾ? ಸತ್ಯ ಸಂಗತಿ ತಿಳಿಯೋತನಕ ಎಲ್ಲರನ್ನೂ ಯಾವುದೋ ಒಂದು ಅನುಮಾನ ಕಾಡೋದಂತೂ ಸತ್ಯ.

ಈ ಘಟನೆ ಬಗ್ಗೆ ಮಾದ್ಯಮ ಒಂದರಲ್ಲಿ ಪ್ರಜ್ವಲ್ ದೇವರಾಜ್ ಮಾತನಾಡಿ ” ನನಗೆ ಹಣ ಕೊಡಲು ಬಾಕಿ ಇತ್ತು.ಹಣ ಕೇಳಿದಾಗ ಚಿತ್ರತಂಡ ಪ್ರತಿಕ್ರಿಯೆ ಕೊಡಲಿಲ್ಲ” ಎಂದು ಹೇಳಿದ್ದಾರೆ.

ಪ್ರಜ್ವಲ್ ದೇವರಾಜ್ ಅಭಿಮಾನಿಗಳು “ಕರಾವಳಿ” ಚಿತ್ರದ ಟ್ರೈಲರ್ ನಲ್ಲಿ  ಪ್ರಜ್ವಲ್ ವಾಯ್ಸ್ ಬದಲು ಬೇರೆಯವರ  ವಾಯ್ಸ್ ಕೇಳಿ ಆಕ್ರೋಶಗೊಂಡು ಗಲಾಟೆ ‌ಮಾಡಿದ್ದಾರೆ.ಆದರೆ ಚಿತ್ರದ ಟ್ರೈಲರ್ ಉತ್ತಮವಾಗಿ ಮೂಡಿ ಬಂದಿದೆ. ಕೇವಲ 25 ಲಕ್ಷ ರೂಪಾಯಿ ಬಾಕಿ ಇರುವುದಕ್ಕೆ ಇಷ್ಟೆಲ್ಲಾ ನಡೆಯಿತಾ.?..