ಕೊಪ್ಪಳ: ಜಿಲ್ಲೆಯ ಕುಕನೂರು ತಾಲ್ಲೂಕಿನ ಭಾನಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಶನಿವಾರ ಬೆಳಗಿನ ಜಾವ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಆರು ಜನ ಗಾಯಗೊಂಡಿದ್ದಾರೆ.
ಕೆಂಚಮ್ಮ ಬಾಳೆಕಾಯಿ (35 ವರ್ಷ), ಅಮೃತಾ ಕೋಟ್ಯಾಳ್ (25 ವರ್ಷ), ರಮೇಶ್ ಬಳ್ಳಾರಿ (45 ವರ್ಷ), ಪ್ರವೀಣ್ (23 ವರ್ಷ) ಮೃತಪಟ್ಟಿದ್ದಾರೆ.
ಓಮಿನಿ ಕಾರಿಗೆ ಪಕ್ಕದ ರಸ್ತೆಯಿಂದ ಬರ್ತಿದ್ದ ಅಶೋಕ್ ಲೇಲ್ಯಾಂಡ್ ಡಿವೈಡರ್ ದಾಟಿ ಡಿಕ್ಕಿ ಹೊಡೆದಿದ್ದು, ಈ ಭೀಕರ ಅಪಘಾತಕ್ಕೆ ಕಾರಣವಾಗಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಬ್ಬಾರ್ ಗ್ರಾಮದವರು.
ಓಮ್ನಿ ವಾಹನದಲ್ಲಿ ಮಂತ್ರಾಲಯಕ್ಕೆ ತೀರ್ಥಯಾತ್ರೆಗೆ ಹೋಗುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಅಶೋಕ್ ಲೇಲ್ಯಾಂಡ್ ಟ್ರಕ್ (ಅಥವಾ ಭಾರೀ ವಾಹನ) ಡಿವೈಡರ್ ದಾಟಿ ಬಂದು ಓಮ್ನಿ ವಾಹನಕ್ಕೆ ನೇರ ಡಿಕ್ಕಿ ಹೊಡೆದಿದೆ. ಅಪಘಾತದ ಪ್ರಭಾವ ತುಂಬಾ ತೀವ್ರವಾಗಿದ್ದರಿಂದ ಓಮಿನಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.




